Advertisement

ಸಾಣೂರು -ಇರ್ವತ್ತೂರು ರಸ್ತೆ ಮಧ್ಯೆಯೇ ವಿದ್ಯುತ್‌ ಕಂಬ !

12:14 AM Jul 08, 2019 | Team Udayavani |

ಕಾರ್ಕಳ: ಸಾಣೂರು -ಇರ್ವತ್ತೂರು ಸಂಪರ್ಕಿಸುವ ರಸ್ತೆಯ ಮುರತ್ತಂಗಡಿ ಬಳಿ ವಿದ್ಯುತ್‌ ಕಂಬ ವೊಂದು ರಸ್ತೆ ಮಧ್ಯೆಯೇ ಇದ್ದು ಸಂಚಾರಕ್ಕೆ ತೊಡಕಾಗಿ ಪರಿಣಮಿಸಿದೆ.

Advertisement

ರಸ್ತೆ ವಿಸ್ತರಣೆಯೊಂದಿಗೆ ಕಾಂಕ್ರಿಟೀಕರಣ ಕಾಮಗಾರಿ ನಡೆಯುವ ವೇಳೆ ವಿದ್ಯುತ್‌ ಕಂಬವನ್ನು ಸ್ಥಳಾಂತರಿಸದಿರುವುದೇ ಸಮಸ್ಯೆಗೆ ಕಾರಣವಾಗಿದೆ. ಇದನ್ನು ನೋಡಿಯೂ ಲೋಕೋಪ ಯೋಗಿ ಇಲಾಖೆ, ಮೆಸ್ಕಾಂ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆಯೇ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ಗುತ್ತಿಗೆದಾರರ ನಿರ್ಲಕ್ಷ್ಯ ಧೋರಣೆ ಬಗ್ಗೆಯೂ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next