Advertisement

ವಿದ್ಯುತ್ ಅವಘಡ: ಮುದ್ದೇಬಿಹಾಳ ಮೂಲದ ಲೈನಮನ್‌ ಸಾವು

10:46 AM Mar 15, 2022 | Team Udayavani |

ಮುದ್ದೇಬಿಹಾಳ: ಬೆಂಗಳೂರಿನ ಸರ್ಜಾಪುರದಲ್ಲಿ ವಿದ್ಯುತ್ ಕಂಬ ಏರಿ ದುರಸ್ಥಿ ಕಾರ್ಯ ನಡೆಸುತ್ತಿದ್ದ ವೇಳೆ ವಿದ್ಯುತ್ ಶಾಕ್ ತಗುಲಿ ಕಂಬದಿಂದ ಬಿದ್ದು, ಲೈನಮನ್ ಸಾವನ್ನಪ್ಪಿರುವ ಘಟನೆ ನಡೆದಿದೆ.

Advertisement

ವಿಜಯಪುರ ಜಿಲ್ಲೆ ಮುದ್ದೇಬಿಹಾಳ ‌ತಾಲೂಕು ರೂಢಗಿ ತಾಂಡಾದ ಲೈನಮನ್ ಪವನ್ ರಾಮಪ್ಪ‌ ಚವ್ಹಾಣ (27) ಮೃತಪಟ್ಟ ದುರ್ಧೈವಿ.

ಇದನ್ನೂ ಓದಿ:ಹಿಜಾಬ್‌ ತೀರ್ಪು; ಇಂದಿನಿಂದ 19ರವರೆಗೆ ಪ್ರತಿಬಂಧಕಾಜ್ಞೆ

ಮಂಗಳವಾರ ಬೆಳಿಗ್ಗೆ ಮೃತರ ಪಾರ್ಥೀವ ಶರೀರವನ್ನು ಸ್ವಗ್ರಾಮಕ್ಕೆ ತರಲಾಗಿದೆ.  ಮೃತ ಪವನ್ ಕುಟುಂಬಕ್ಕೆ ಆಧಾರಸ್ತಂಭವಾಗಿದ್ದರು. ಕೆಲ ವರ್ಷಗಳ ಹಿಂದೆ ಐಟಿಐ ವಿದ್ಯಾರ್ಹತೆಯ ಮೇಲೆ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಯಲ್ಲಿ ಜೂನಿಯರ್ ಲೈನಮನ್ ಎಂದು ಕರ್ತವ್ಯಕ್ಕೆ ಸೇರಿದ್ದರು ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next