Advertisement

Congress ಹೈಕಮಾಂಡ್‌ ನೀತಿ ಪಾಠ ಮುಂದೂಡಿಕೆ

09:42 PM Jun 20, 2023 | Team Udayavani |

ಬೆಂಗಳೂರು: ಅಮೆರಿಕಾ ಪ್ರವಾಸದಲ್ಲಿರುವ ಕಾಂಗ್ರೆಸ್‌ ನಾಯಕ ರಾಹುಲ್‌ಗಾಂಧಿ ಅವರ ಆಗಮನ ವಿಳಂಬವಾಗಿರುವ ಹಿನ್ನೆಲೆಯಲ್ಲಿ ರಾಜ್ಯದ ಸಚಿವರಿಗೆ ದಿಲ್ಲಿಯಲ್ಲಿ ಬುಧವಾರ ನಿಗದಿಯಾಗಿದ್ದ “ನೀತಿ ಪಾಠ” ಮುಂದೂಡಲ್ಪಟ್ಟಿದೆ.

Advertisement

ನಿಗದಿಯಂತೆ ಬುಧವಾರ ದಿಲ್ಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್‌ಗಾಂಧಿ ಅವರಿಂದ ನೀತಿ ಪಾಠ ನಡೆಯಬೇಕಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್‌ ಸೇರಿ ಸಂಪುಟದ ಎಲ್ಲಾ ಸಚಿವರು ಮಂಗಳವಾರ ದಿಲ್ಲಿಗೆ ತೆರಳಬೇಕಿತ್ತು. ಆದರೆ ರಾಹುಲ್‌ಗಾಂಧಿ ಅವರು 21ರ ಬದಲಿಗೆ 22ಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ನೀತಿಪಾಠ ಮುಂದೂಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next