Advertisement

ಅರ್ಜಿ ವಿಚಾರಣೆ ಮುಂದೂಡಿಕೆ

11:35 AM Jun 16, 2018 | Team Udayavani |

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ದುಬಾರಿ ಮೌಲ್ಯದ ವಾಚ್‌ ಉಡುಗೊರೆ ಪಡೆದ ಆರೋಪ ಪ್ರಕರಣ ಮುಕ್ತಾಯಗೊಳಿಸಿದ ಕುರಿತು ತನಿಖಾ ದಾಖಲೆಗಳನ್ನು ನೀಡುವಂತೆ ಎಸಿಬಿಗೆ ನಿರ್ದೇಶಿಸುವಂತೆ ಕೋರಿರುವ ರಿಟ್‌ ಅರ್ಜಿ ಕುರಿತು ಆಕ್ಷೇಪಣೆಗಳಿದ್ದರೆ ಸಲ್ಲಿಸುವಂತೆ ಸೂಚಿಸಿ, ಹೈಕೋರ್ಟ್‌ ವಿಚಾರಣೆ ಮುಂದೂಡಿದೆ.

Advertisement

ಶುಕ್ರವಾರ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಅರವಿಂದ ಕುಮಾರ್‌ ಅವರಿದ್ದ ಏಕಸದಸ್ಯ ಪೀಠ, ಇಂಥದ್ದೇ ಅರ್ಜಿಯೊಂದನ್ನು ವಿಭಾಗೀಯ ಪೀಠ ಇತ್ಯರ್ಥಪಡಿಸಿದೆ. ಇದೂ ಅದೇ ಮಾದರಿ ಅರ್ಜಿಯಾಗಿದ್ದರೆ ವಿಭಾಗೀಯ ಪೀಠದ ಆದೇಶ ಪರಿಶೀಲಿಸಿ ಮಾಹಿತಿ ನೀಡಿ ಎಂದು  ಎಸಿಬಿ ಪರ ವಕೀಲರಿಗೆ ಸೂಚಿಸಿತು.

Advertisement

Udayavani is now on Telegram. Click here to join our channel and stay updated with the latest news.

Next