Advertisement

ಮನೆ ಬಾಗಿಲಿಗೆ ಪೋಸ್ಟ್‌ ಪೇಮೆಂಟ್‌ ಬ್ಯಾಂಕ್‌ ಸೇವೆ

07:56 AM Jun 23, 2020 | Suhan S |

ಬೀದರ: ಗ್ರಾಹಕರ ಮನೆ ಬಾಗಿಲಿಗೆ ಇಂಡಿಯಾ ಪೋಸ್ಟ್‌ ಪೇಮೆಂಟ್‌ ಬ್ಯಾಂಕ್‌ ಸೇವೆ ಒದಗಿಸುವಲ್ಲಿ ಜಿಲ್ಲೆಯ ಹುಲಸೂರು ಅಂಚೆ ಕಚೇರಿ ವ್ಯಾಪ್ತಿಯ ಅಟ್ಟರಗಾ ಶಾಖೆ ಅಂಚೆ ಪಾಲಕ ದತ್ತಾ ಕಾಂಬಳೆ ರಾಷ್ಟ್ರ ಮಟ್ಟದಲ್ಲಿ ಮುಂಚೂಣಿಯಲ್ಲಿ ಇದ್ದಾರೆ.

Advertisement

ಕೋವಿಡ್ ಲಾಕ್‌ಡೌನ್‌ ಅವಧಿಯಲ್ಲಿ ವೃದ್ಧಾಪ್ಯ ವೇತನ, ವಿಧವಾ ವೇತನ, ಅಡುಗೆ ಅನಿಲ ಸಬ್ಸಿಡಿ, ಬೆಳೆ ಪರಿಹಾರ, ಪ್ರಧಾನಮಂತ್ರಿ ಪರಿಹಾರ ಧನದ ಸುಮಾರು 25 ಲಕ್ಷಕ್ಕೂ ಅಧಿಕ ಹಣವನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸಿ ಗಮನ ಸೆಳೆದಿದ್ದಾರೆ. ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 8 ಗಂಟೆವರೆಗೂ ಸೇವೆ ಒದಗಿಸಿದ್ದಾರೆ. ಗ್ರಾಹಕರು ಹೊಲದಲ್ಲಿ ಕೆಲಸ ಮಾಡುತ್ತಿದ್ದರೆ ಅಲ್ಲಿಗೇ ಹೋಗಿ ಅವರ ಕೈಗೆ ಹಣ ನೀಡಿ ಇಂಡಿಯಾ ಪೋಸ್ಟ್‌ ಪೇಮೆಂಟ್‌ ಬ್ಯಾಂಕಿನ “ಆಪ್‌ ಕೆ ಬ್ಯಾಂಕ್‌, ಆಪ್‌ ಕೆ ದ್ವಾರ್‌’ ಘೋಷಣೆಯನ್ನು ಸಾಕಾರಗೊಳಿಸಿದ್ದಾರೆ. ಎಇಪಿಎಸ್‌ ಅಡಿ ಗ್ರಾಹಕರ ಮನೆ ಬಾಗಿಲಿಗೆ ಬ್ಯಾಂಕ್‌ನಲ್ಲಿ ಇರುವ ಹಣ ತಲುಪಿಸಿದ್ದಾರೆ ಎಂದು ಉಪ ಅಂಚೆ ನಿರೀಕ್ಷಕ ಸತೀಶ ನೇರ್ಲಕಟ್ಟೆ ತಿಳಿಸಿದ್ದಾರೆ.

ಸನ್ಮಾನ: ಗ್ರಾಹಕ ಸ್ನೇಹಿಯಾಗಿ ಕಾರ್ಯ ನಿರ್ವಹಿಸುತ್ತಿರುವ ದತ್ತಾ ಕಾಂಬಳೆ ಅವರನ್ನು ಅಟ್ಟರಗಾ ಗ್ರಾಮದಲ್ಲಿ ಪಾಸ್‌ಪೋರ್ಟ್‌ ಸೇವಾ ಕೇಂದ್ರದ ಅಧಿಕಾರಿ ಮಂಗಲಾ ಭಾಗವತ್‌, ಸತೀಶ ನೇರಲೆಕಟ್ಟಿ ಸನ್ಮಾನಿಸಿದರು. ಪ್ರಮುಖರಾದ ವಿಜಯಕುಮಾರ ಜೋಗಿರೆ, ಭರತ, ರಾಮರತನ್‌ ದೇವಾನೆ, ರಾಜೇಶ, ವಿಠ್ಠಲರಾವ್‌, ಗುಣವಂತ ಪಾಟೀಲ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next