Advertisement

ಕಂಗನಾ ವಿರುದ್ಧ ಪೋಸ್ಟ್: ಕೈ ನಾಯಕಿಗೆ‌ ಟಿಕೆಟ್‌ ಡೌಟ್‌

02:42 PM Mar 29, 2024 | Team Udayavani |

ಹೊಸದಿಲ್ಲಿ: ಹಿಮಾಚಲ ಪ್ರದೇಶದ ಮಂಡಿ ಅಭ್ಯರ್ಥಿ, ಬಾಲಿ ವುಡ್‌ ನಟಿ ಕಂಗನಾ ರಾಣಾವತ್‌ ವಿರುದ್ಧ ಆಕ್ಷೇ ಪಾರ್ಹ ಪೋಸ್ಟ್‌ ಮಾಡಿರುವ ಆರೋಪಕ್ಕೆ ಸಿಲುಕಿರುವ ಕಾಂಗ್ರೆಸ್‌ ನಾಯಕಿ ಸುಪ್ರಿಯಾ ಶ್ರೀನೇತ್‌ ಈಗ ಪಕ್ಷದಿಂದ ಸ್ಪರ್ಧಿಸುವ ಅವಕಾಶವನ್ನು ಕಳೆದುಕೊಂಡಿದ್ದಾರೆ. 2019ರ ಚುನಾವಣೆಯಲ್ಲಿ ಉತ್ತರಪ್ರದೇಶದ ಮಹಾರಾಜ್‌ ಗಂಜ್‌ ಕ್ಷೇತ್ರದಲ್ಲಿ ಕಣಕ್ಕಿಳಿದು ಸೋತಿದ್ದ ಶ್ರೀನೇತ್‌ ಈ ಬಾರಿಯೂ ಅದೇ ಕ್ಷೇತ್ರದಲ್ಲಿ ಸ್ಪರ್ಧಿಸಲು ಬಯಸಿದ್ದರು. ಆದರೆ ಬುಧವಾರ ಬಿಡುಗಡೆಯಾದ ಅಭ್ಯರ್ಥಿಗಳ ಪಟ್ಟಿಯಲ್ಲಿ ಪಕ್ಷವು ಸುಪ್ರಿಯಾ ಹೆಸರನ್ನು ಕೈಬಿಟ್ಟಿದೆ. ಕಂಗನಾ ವಿರುದ್ಧ ಹೇಳಿಕೆ ನೀಡಿ ಪಕ್ಷ ಕ್ಕೆ ಮುಜುಗರ ಮಾಡಿ ದ್ದಕ್ಕಾಗಿ ಟಿಕೆಟ್‌ ನೀಡಿಲ್ಲ ಎನ್ನಲಾಗಿದೆ.

Advertisement

ದೀದಿ ಅವಹೇಳನ: ದಿಲೀಪ್‌ ವಿರುದ ಎಫ್ಐಆರ್‌ ಸಿಎಂ ಮಮತಾ ಬ್ಯಾನರ್ಜಿ ಕುರಿತಾಗಿ ಕೀಳು ಹೇಳಿಕೆ ನೀಡಿದ್ದ ಪಶ್ಚಿಮ ಬಂಗಾಲ ಬಿಜೆಪಿ ಮುಖಂಡ ದಿಲೀಪ್‌ ಘೋಷ್‌ ವಿರುದ್ಧ ದುರ್ಗಾಪುರ ಪೊಲೀಸ್‌ ಠಾಣೆಯಲ್ಲಿ ಎಫ್ಐಆರ್‌ ದಾಖಲಾಗಿದೆ. ಅಲ್ಲದೆ ತಮ್ಮ ಆಕ್ಷೇ ಪಾರ್ಹ ಹೇಳಿಕೆಗಳು ಮಾದರಿ ನೀತಿ ಸಂಹಿತೆ ಯನ್ನು ಉಲ್ಲಂ ಸಿದ್ದು, ಈ ಬಗ್ಗೆ ಶುಕ್ರವಾರ ದೊಳಗೆ(ಮಾ.29) ಸ್ಪಷ್ಟನೆ ನೀಡುವಂತೆ ಆಗ್ರಹಿಸಿ ಚುನಾವಣ ಆಯೋಗವು ಈಗಾಗಲೇ ನೋಟಿಸ್‌ ನೀಡಿದೆ.

ಯಾರೇ ಏನು ತಪ್ಪು ಮಾತಾಡಿದರೂ ನಾವು ಅದನ್ನು ಸಮರ್ಥಿಸಿಕೊಳ್ಳುವುದಿಲ್ಲ. ಭಾಷೆ ಯಾವತ್ತೂ ಅಸಂಸದೀಯವಾಗಿರಬಾರದು. ಮತ್ತೂಬ್ಬರ ವ್ಯಕ್ತಿತ್ವಕ್ಕೆ ಧಕ್ಕೆ ತರುವುದು ಸರಿಯಲ್ಲ. ರಾಜಕೀಯ ಯಾವತ್ತೂ ತತ್ತಾಧಾರಿತವಾಗಿರಬೇಕು. ●ಸಚಿನ್‌ ಪೈಲಟ್‌, ಕಾಂಗ್ರೆಸ್‌ ನಾಯಕ (ಕಂಗನಾ ಕುರಿತು ಸುಪ್ರಿಯಾ ಹೇಳಿಕೆಗೆ ಪ್ರತಿಕ್ರಿಯಿಸಿ)

Advertisement

Udayavani is now on Telegram. Click here to join our channel and stay updated with the latest news.

Next