Advertisement
ಸುಮಾರು 5 ಲಕ್ಷ ರೂ. ವೆಚ್ಚದಲ್ಲಿ ಹದಗೆಟ್ಟ ಪ್ಯಾಚ್ ಕಾಮಗಾರಿ ಮಾಡುವ ವೇಳೆ ನಿಗದಿಯಂತೆ ಜಲ್ಲಿಕಲ್ಲುಬಳಸದೆ ಮಣ್ಣಿನ ಮೇಲೆ ಡಾಂಬರು ಹಾಕಿರುವಕಾರಣ ಸಂಪೂರ್ಣ ಕಳಪೆಯಿಂದ ಕೂಡಿದೆ. ರಸ್ತೆ ಮೇಲೆ ಅಧಿಕ ಭಾರದ ವಾಹನವಿರಲಿ ದ್ವಿಚಕ್ರ ವಾಹನಸಂಚರಿಸಿದರೂ ಡಾಮಬರು ಕಿತ್ತು ಹೋಗುವಂತಿದೆ.
Related Articles
Advertisement
ಸಚಿವ-ಶಾಸಕರೇ ಕ್ರಮ ವಹಿಸಿ: ಪಂಜನಹಳ್ಳಿ-ವೀರನಪುರದ ಸುಮಾರು 200ಮೀಟರ್ ರಸ್ತೆಯನ್ನು ಕಳಪೆಯಾಗಿಕಾಟಾಚಾರದಿಂದ ಮಾಡಲಾಗಿದ್ದು, ನಿಗದಿಯಂತೆವಸ್ತುಗಳನ್ನು ಬಳಕೆ ಮಾಡಿಲ್ಲ. ನಿರ್ಮಾಣವಾದಮೂರು ದಿನದಲ್ಲೆ ರಸ್ತೆ ಡಾಂಬರು ಮೇಲೆಳುತ್ತಿರುವಕಾರಣ ಇದು ಹೆಚ್ಚು ಸಮಯ ಬಾಳಿಕೆ ಬರುವುದಿಲ್ಲ.ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಹಾಗೂಗುತ್ತಿಗೆದಾರನ ವಿರುದ್ಧ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ-ಶಾಸಕ ಸಿ.ಎಸ್.ನಿರಂಜನಕುಮಾರ್ಕ್ರಮ ವಹಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಪಂಜನಹಳ್ಳಿ-ವೀರನಪುರದಸುಮಾರು 200 ಮೀಟರ್ ರಸ್ತೆಯಪ್ಯಾಚ್ ಕಾಮಗಾರಿ ಕೆಲಸವನ್ನುಗುತ್ತಿಗೆದಾರ ಮಹೇಶ್ ಮಾಡಿದ್ದಾರೆ.ರಸ್ತೆಯನ್ನು ಕಳಪೆಯಿಂದ ಮಾಡಿದ್ದರೆ ಮತ್ತೆಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಕ್ರಮವಹಿಸಲಾಗುವುದು. – ಶಿವಕುಮಾರ್, ಎಇ
– ಬಸವರಾಜು ಎಸ್.ಹಂಗಳ