Advertisement

ಕಾವೇರಿ ನದಿ ನೀರು ಐತಿಹಾಸಿಕ ತೀರ್ಪು: ಪುದುಚೇರಿ ಸಿಎಂ ಸ್ವಾಗತ

04:09 PM Feb 16, 2018 | udayavani editorial |

ಪುದುಚೇರಿ : ಕಾವೇರಿ ನದಿ ನೀರು ಹಂಚಿಕೆ ಕುರಿತಾಗಿ ಸುಪ್ರೀಂ ಕೋರ್ಟ್‌ ಇಂದು ನೀಡಿರುವ ಐತಿಹಾಸಿಕ ತೀರ್ಪನ್ನು  ಪುದುಚೇರಿ ಮುಖ್ಯಮಂತ್ರಿ ವಿ ನಾರಾಯಣಸಾಮಿ ಸ್ವಾಗತಿಸಿದ್ದಾರೆ.

Advertisement

ಈ ತೀರ್ಪಿನ ಮೂಲಕ ಪುದುಚೇರಿಯು ಕಾವೇರಿ ನದಿಯ ಟೇಲ್‌ ಎಂಡ್‌ ಪ್ರದೇಶವಾಗಿರುವ ಕಾರೈಕಲ್‌ ವಲಯಕ್ಕೆ 7 ಟಿಎಂಸಿ ಅಡಿ ನೀರು ಸಿಗುವುದನ್ನು ಖಾತರಿ ಪಡಿಸಿರುವುದು ಸ್ವಾಗತಾರ್ಹವಾಗಿದೆ ಎಂದವರು ಹೇಳಿದ್ದಾರೆ. 

ಸುಪ್ರೀಂ ಕೋರ್ಟ್‌ ಇಂದು ನೀಡಿರುವ ಐತಿಹಾಸಿಕ ತೀರ್ಪು ಕಾವೇ ನದಿ ನೀರು ವಿವಾದ ನ್ಯಾಯ ಮಂಡಳಿಯು 2007ರಲ್ಲಿ ನೀಡಿದ ತೀರ್ಪಿಗೆ ಅನುಗುಣವಾಗಿದ್ದು ಪುದುಚೇರಿಗೆ ಅನುಕೂಲಕರವಾಗಿದೆ ಎಂದವರು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next