Advertisement

ಆಕ್ಷೇಪಾರ್ಹ ಫ‌ಲಕ ಪ್ರದರ್ಶನ : ಹಿಂದೂಗಳಲ್ಲಿ ಕ್ಷಮೆಯಾಚನೆ

10:06 AM Feb 08, 2020 | Team Udayavani |

ಲಾಹೋರ್‌: ಪಾಕಿಸ್ಥಾನದ ಅಲ್ಪಸಂಖ್ಯಾತ ಹಿಂದೂಗಳ ವಿರುದ್ಧ ಆಕ್ಷೇಪಾರ್ಹ ಫ‌ಲಕಗಳನ್ನು ಪ್ರದರ್ಶಿಸಿದ್ದ ಆಡಳಿತಾರೂಢ ತೆಹ್ರೀಕ್‌-ಐ-ಇನ್ಸಾಫ್ ಪಕ್ಷದ ನಾಯಕ ಮಿಯಾನ್‌ ಅಕ್ರಾಮ್‌ ಉಸ್ಮಾನ್‌ ಶುಕ್ರವಾರ ಕ್ಷಮೆ ಯಾಚಿಸಿದ್ದಾರೆ.

Advertisement

ಫೆ.5ರಂದು ಪಾಕಿಸ್ಥಾನ ಆಚರಿಸಿದ್ದ ಕಾಶ್ಮೀರ ಒಗ್ಗಟ್ಟಿನ ದಿನದಂದು ಅವರು ‘ಹಿಂದೂಗಳು ಮಾತಿಗೆ ಬಗ್ಗುವುದಿಲ್ಲ, ಹೊಡೆತಕ್ಕೆ ಬಗ್ಗುತ್ತಾರೆ’ ಎಂದು ಬರೆದಿದ್ದ ಫ‌ಲಕ ಪ್ರದರ್ಶಿಸಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಇದಕ್ಕೆ ಭಾರಿ ವಿರೋಧ ವ್ಯಕ್ತವಾಗುತ್ತಿದ್ದಂತೆ ಟ್ವಿಟರ್‌ನಲ್ಲಿ ಕ್ಷಮೆ ಕೇಳಿದ್ದಾರೆ.

‘ಗಡಿಯ ಎರಡೂ ಬದಿಗಳಲ್ಲಿ ನೆಲೆಸಿರುವ ಶಾಂತಿಪ್ರಿಯ ಹಿಂದೂಗಳಲ್ಲಿ ನಾನು ಕ್ಷಮೆ ಯಾಚಿಸುತ್ತೇನೆ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next