Advertisement

ರಾಜಕೀಯ ವೈಷಮ್ಯ: ಮಕ್ಕಳಿಗೆ ವಿಷ ಪ್ರಾಶನ!

11:20 PM Aug 03, 2023 | Team Udayavani |

ದೇವನಹಳ್ಳಿ: ತಾಲೂಕಿನ ದೊಡ್ಡಸೊಣ್ಣೆ ಗ್ರಾಮದಲ್ಲಿ ದುಷ್ಕರ್ಮಿಗಳು ಇಬ್ಬರು ಬಾಲಕಿಯರಿಗೆ ವಿಷ ಕುಡಿಸಿ ಪರಾರಿಯಾಗಿದ್ದು, ಸರಣಿ ವಿಷ ಪ್ರಾಶನ ಘಟನೆಯಿಂದ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.

Advertisement

ಮಂಗಳವಾರ ಬೆಳಗ್ಗೆ ಕಿಡಿಗೇಡಿಗಳು ಗ್ರಾಪಂ ಸದಸ್ಯೆ ಶಿಲ್ಪ ಅಶೋಕ್‌ ಅವರ ಮಗಳು ಪಲ್ಲವಿ (12)ಗೆ ಬೆದರಿಕೆಯೊಡ್ಡಿ ವಿಷ ಕುಡಿಸಿದ್ದಾರೆ. ಈ ಘಟನೆಯಿಂದ ಆತಂಕಕ್ಕೆ ಒಳಗಾಗಿದ್ದ ದಂಪತಿ ಚೇತರಿಸಿಕೊಳ್ಳುವ ಮುನ್ನವೇ ಗುರುವಾರ ಬೆಳಗ್ಗೆ ಮತ್ತೆ ದುಷ್ಕರ್ಮಿಗಳು ಪಲ್ಲವಿಯ ಚಿಕ್ಕಪ್ಪನ ಮಗಳಾದ ಅನುಷಾಗೂ ಬೆದರಿಕೆ ಹಾಕಿ, ವಿಷ ಕುಡಿಸಿ ಪರಾರಿಯಾಗಿದ್ದಾರೆ. ಒಂದೇ ಕುಟುಂಬದ ಇಬ್ಬರು ಮಕ್ಕಳಿಗೆ ವಿಷ ಕುಡಿಸಿದ ಪ್ರಕರಣ ಗ್ರಾಮಸ್ಥರನ್ನು ಬೆಚ್ಚಿ ಬೀಳಿಸಿದೆ. ಇಬ್ಬರನ್ನೂ ದೇವನಹಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇತ್ತೀಚೆಗಷ್ಟೇ ನಡೆದ ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ವೈಷಮ್ಯದಿಂದ ಈ ಕೃತ್ಯ ಎಸಗಲಾಗಿದೆ ಎಂದು ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ. ದೇವನಹಳ್ಳಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next