Advertisement

ಬಿಜೆಪಿಯಲ್ಲಿ ನಾ ಶಕ್ತಿಶಾಲಿ, ಕಾಂಗ್ರೆಸ್‌ನವರು ನಡುಗುತ್ತಿದ್ದಾರೆ!

04:09 PM Nov 17, 2018 | |

ಕೊಪ್ಪಳ : ‘ನಾನು ಬಿಜೆಪಿಯಲ್ಲಿ ಬಹಳಷ್ಟು ಶಕ್ತಿ ಶಾಲಿಯಾಗಿ ಬೆಳೆದಿದ್ದೇನೆ.ನನ್ನನ್ನು ಕಂಡು ಕಾಂಗ್ರೆಸ್‌ ನಾಯಕರು ನಡುಗುತ್ತಾರೆ’ ಎಂದು ಶಾಸಕ ಶ್ರೀರಾಮುಲು ಅವರು ಹೇಳಿಕೆ ನೀಡಿದ್ದಾರೆ. 

Advertisement

ಯಲಬುರ್ಗಾ ತಾಲೂಕಿನ ಹಿರೇವಂಕಲಕುಂಟಾ ಗ್ರಾಮದಲ್ಲಿ  ಶನಿವಾರ ಹಿರೇವಂಕಲಕುಂಟಾ ಹೋಬಳಿಯ ವಾಲ್ಮೀಕಿ ಮಹಾಸಭಾದಿಂದ ಮಹರ್ಷಿ ವಾಲ್ಮೀಕಿ ಜಯಂತಿ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀರಾಮುಲು ಈ ಹೇಳಿಕೆ ನೀಡಿದ್ದಾರೆ.  

‘ಜನರ ಆಶೀರ್ವಾದ ದಿಂದ ನಾನು ಬಿಜೆಪಿಯಲ್ಲಿ ಬಹಳಷ್ಟು ಶಕ್ತಿಶಾಲಿಯಾಗಿದ್ದೇನೆ. ಅದಕ್ಕಾಗಿ ನನ್ನನ್ನು ಕಂಡರೆ  ಕಾಂಗ್ರೆಸ್‌ ನಾಯಕರು ನಡುಗುತ್ತಾರೆ. ಈ ಶ್ರೀರಾಮುಲು ತೇಜೋವಧೆ ಮಾಡುವುದು ಯಾರಿಗೂ ಶೋಭೆ ತರುವ ಕೆಲಸ ಅಲ್ಲ’ ಎಂದರು. 

‘ರಾಜಕೀಯ ಪಿತೂರಿಯಿಂದಲಾಗಿ ಜನಾರ್ದನ ರೆಡ್ಡಿ ಅವರನ್ನು ಬಂಧಿಸಲಾಗಿದೆ.ಇದರಲ್ಲಿ ಸರ್ಕಾರದ ನೇರ ಕೈವಾಡ ಇದೆ .ಮುಖ್ಯಮಂತ್ರಿಗಳು ರಾಜಕೀಯ ದ್ವೇಷದಿಂದ ಸೇಡು ತೀರಿಸಿಕೊಂಡಿದ್ದಾರೆ’ ಎಂದು ಕಿಡಿ ಕಾರಿದರು. 

Advertisement

ಬಳ್ಳಾರಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಉಗ್ರಪ್ಪ ಅವರ ವಿರುದ್ಧ ಸಹೋದರಿ ಜೆ.ಶಾಂತಾ ಅವರು ಭಾರೀ ಅಂತರದಿಂದ ಸೋತ ಬಳಿಕವೂ ನಾನು ಬಹಳಷ್ಟು ಶಕ್ತಿಶಾಲಿ, ಕಾಂಗ್ರೆಸ್‌ ನಾಯಕರು ನನ್ನನ್ನು ಕಂಡು ನಡುಗುತ್ತಾರೆ ಎಂದಿರುವುದು ಅಚ್ಚರಿಗೆ ಕಾರಣವಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next