Advertisement

ನೀತಿ ಆಯೋಗ ತಂಡ ಬ್ಯಾಂಕ್‌ ಭೇಟಿ

10:41 PM Jun 20, 2019 | Sriram |

ಕಾಸರಗೋಡು: ಕೇರಳ ಸರಕಾರಿ ಬ್ಯಾಂಕ್‌ಗಳ ಕುರಿತು ಅಧ್ಯಯನ ನಡೆಸುವ ನೀತಿ ಆಯೋಗದ ಕಾರ್ಯದರ್ಶಿ ಎಸ್‌. ಗೋಪಾಲಕೃಷ್ಣನ್‌ ನೇತೃತ್ವದ ಕೇಂದ್ರ ತಂಡವು ಕಾಸರಗೋಡಿನ ಪ್ರಧಾನ ಸಹಕಾರಿ ಬ್ಯಾಂಕಾದ ಕಾಸರಗೋಡು ಸರ್ವಿಸ್‌ ಕೋ- ಆಪರೇಟಿವ್‌ ಬ್ಯಾಂಕನ್ನು ಸಂದರ್ಶಿಸಿ ಬ್ಯಾಂಕ್‌ನ ಬೆಳವಣಿಗೆ ಬಗ್ಗೆ, ಆಡಳಿತ ಸಮಿತಿ ಮತ್ತು ನೌಕರರಿಂದ ಮಾಹಿತಿ ಸಂಗ್ರಹಿಸಿತು.

Advertisement

ಬ್ಯಾಂಕ್‌ ಸ್ಥಾಪನೆಗೊಂಡು 30 ವರ್ಷದೊಳಗೆ ಸೂಪರ್‌ ಗ್ರೇಡ್‌ ಪದವಿ ಹಾಗೂ ಐಎಸ್‌ಒ 9001- 2015 ಅಂಗೀಕಾರ ದೊರೆತ ಕುರಿತು ಬ್ಯಾಂಕ್‌ ಅಧ್ಯಕ್ಷ ಎಸ್‌.ಜೆ.ಪ್ರಸಾದ್‌ ವಿವರಿಸಿದರು.

ಅಧಿಕಾರಿಗಳಾದ ಎಂ. ಸುಮತಿ, ಪಿ. ಜಾನಕಿ, ಅಶೋಕ್‌ ರೈ ಅವರು ಬ್ಯಾಂಕ್‌ನ ಕಾರ್ಯ ಚಟುವಟಿಕೆ ಹಾಗೂ ಬೆಳವಣಿಗೆಯ ಬಗ್ಗೆ ತಂಡಕ್ಕೆ ವಿವರಿಸಿದರು. ಬ್ಯಾಂಕ್‌ನ ಬೆಳವಣಿಗೆ ಬಗ್ಗೆ ಕೇಂದ್ರ ತಂಡವು ಮೆಚ್ಚುಗೆ ವ್ಯಕ್ತಪಡಿಸಿತು.

Advertisement

Udayavani is now on Telegram. Click here to join our channel and stay updated with the latest news.

Next