Advertisement

ಏಕಕಾಲದ ಚುನಾವಣೆಗೆ ನೀತಿ ಆಯೋಗ ಬೆಂಬಲ

07:10 AM Aug 28, 2017 | Team Udayavani |

ನವದೆಹಲಿ: ಚುನಾವಣೆ ವೆಚ್ಚ, ನಿರ್ವಹಣೆ ಸುಲಭವಾಗಿಸುವ ಉದ್ದೇಶದಿಂದ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳನ್ನು ಏಕಕಾಲಕ್ಕೆ ನಡೆಸುವುದರ ಬಗ್ಗೆ ದೇಶದ ಚಿಂತಕ ಚಾವಡಿ, ನೀತಿ ಆಯೋಗ ಬೆಂಬಲ ವ್ಯಕ್ತಪಡಿಸಿದೆ. 2024ರಿಂದ ಈ ಪದ್ಧತಿಯನ್ನು “ರಾಷ್ಟ್ರಿಯ ಹಿತಾಸಕ್ತಿ’ಗೆ ಅನುಗುಣವಾಗಿ ಜಾರಿಗೊಳಿಸುವುದಕ್ಕೆ ಬೆಂಬಲ ಸೂಚಿಸಿದೆ.

Advertisement

ದೇಶದಲ್ಲಿ ನಡೆವ ಎಲ್ಲಾ ಚುನಾವಣೆಗಳು, ಮುಕ್ತ ಪಾರದರ್ಶಕವಾಗಿ ಮತ್ತು ಏಕಕಾಲಕ್ಕೆ ನಡೆಯಬೇಕು. ಇದು ಕನಿಷ್ಠ ಪ್ರಚಾರದಿಂದ ಕೂಡಿದ್ದು, ಆಡಳಿತಕ್ಕೆ ಭಂಗ ತರದೇ ಇರಬೇಕು ಎಂದು ನೀತಿ ಆಯೋಗ ತನ್ನ “ಮೂರು ವರ್ಷದ ಕಾರ್ಯಕಾರಿ ಯೋಜನೆ 2017-18ರಿಂದ 2019-20’ರ ವರದಿಯಲ್ಲಿ ಹೇಳಿದೆ. 

2024ರಿಂದ  ಏಕಕಾಲಕ್ಕೆ ಚುನಾವಣೆಗಳನ್ನು ನಡೆಸುವುದರ ಬಗ್ಗೆ ನಾವು ಕೆಲಸ ಆರಂಭವಿಸುವ ನಿರೀಕ್ಷೆ ಇದೆ. ಹೀಗೆ ಮಾಡಲು ಕೆಲವು ವಿಧಾನಸಭೆಗಳ ಅವಧಿ ಮೊಟಕುಗೊಳ್ಳಬಹುದು ಅಥವಾ ವಿಸ್ತಾರವಾಗ ಬಹುದು. ಈ ಪದ್ಧತಿಯನ್ನು ರಾಷ್ಟ್ರೀಯ ಹಿತಾಸಕ್ತಿಗಾಗಿ ಜಾರಿಗೊಳಿಸಲು, ಸಂವಿಧಾನ ತಜ್ಞರು, ಚಿಂತಕರು, ಸರ್ಕಾರಿ ಅಧಿಕಾರಿಗಳು, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಮಿತಿಯೊಂದನ್ನು ರಚಿಸಬೇಕಿದ್ದು, ಈ ಬಗ್ಗೆ ಗಹನವಾದ ಚರ್ಚೆ ನಡೆಸಬೇಕಿದೆ. ಜೊತೆಗೆ ಇದಕ್ಕೆ ಸಂವಿಧಾನ ತಿದ್ದು ಪಡಿಯ ಕರಡನ್ನೂ ರೂಪಿಸಬೇಕಿದ್ದು, ರೂಪುರೇಷೆ ಗಳನ್ನು ಸಿದ್ಧಪಡಿಸ ಬೇಕಿದೆ ಎಂದಿದೆ. ಇದರೊಂದಿಗೆ ಏಕಕಾಲಕ್ಕೆ ಚುನಾ ವಣೆ ನಡೆಸುವ ಶಿಫಾರಸಿನ ಬಗ್ಗೆ ಚುನಾವಣಾ ಆಯೋಗ, ದೃಷ್ಟಿ ಹರಿಸಬೇಕಿದ್ದು, ಮಾ.2018ರ ವೇಳೆಗೆ ಒಂದು ಸಮಯದ ಚೌಕಟ್ಟು ರೂಪಿಸಬೇಕಿದೆ ಎಂದೂ ಹೇಳಿದೆ.
 
ಪ್ರಧಾನಿ ನರೇಂದ್ರ ಮೋದಿ ಬಹು ದಿನಗಳಿಂದಲೇ ಈ ವಿಚಾರದ ಬಗ್ಗೆ ಹೇಳುತ್ತಲೇ ಬಂದಿದ್ದು, ವಿವಿಧ ವೇದಿಕೆಗಳಲ್ಲೂ ಪ್ರಸ್ತಾಪ ಮಾಡಿದ್ದಾರೆ.

ಟ್ರಾಫಿಕ್‌ ಕೇಸು ವಿಚಾರಣೆ ಪ್ರತ್ಯೇಕ ಕೋರ್ಟ್‌ : ಇನ್ನು, ಟ್ರಾಫಿಕ್‌ ಕೇಸುಗಳ ವಿಚಾರಣೆಗೆ ಪ್ರತ್ಯೇಕ ಕೋರ್ಟ್‌ ಸ್ಥಾಪಿಸುವಂತೆ ನೀತಿ ಆಯೋಗ ಶಿಫಾರಸು ಮಾಡಿದೆ. ಈ ಕೋರ್ಟ್‌ಗಳಲ್ಲಿ ನ್ಯಾಯಾಧೀಶರು ದಂಡ ಕಟ್ಟುವಂತೆ ಹೇಳುವವರೆಗೂ, ದಂಡ ಕಟ್ಟ ಬೇಕೆಂದಿಲ್ಲ. ಶಿಫಾರಸನ್ನು ಕೇಂದ್ರ ಕಾನೂನು ಸಚಿ ವಾಲಯಕ್ಕೆ ಸಲ್ಲಿಸಲಾಗಿದ್ದು, ಈ ವಿಶೇಷ ಕೋರ್ಟ್‌ ಗಳಿಗೆ ಕಾನೂನು ಪದವೀಧರರನ್ನು ನ್ಯಾಯದಾನಕ್ಕಾಗಿ ನೇಮಕ ಮಾಡಿಕೊಳ್ಳಬೇಕು ಎಂದಿದೆ. ಇದರಿಂದ ಕೆಳ ಹಂತದ ಕೋರ್ಟ್‌ಗಳು ಇತರ ಪ್ರಕರಣಗಳಲ್ಲಿ ನ್ಯಾಯದಾನ ಮಾಡುವುದು ಸುಲಭವಾಗುತ್ತದೆ. ಕೇಸುಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಈ ಹೊಸ ಐಡಿಯಾವೊಂದನ್ನು ನೀತಿ ಆಯೋಗ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next