Advertisement
ಗೋವಾದ ಪರಿವರಿಯಂ ಮೂಲದ ಇಲ್ಲಿನ ಉಣಕಲ್ಲ ಸಾಯಿನಗರ ನಿವಾಸಿ ಗೌರೇಶ ಆರ್. ಕೇರಕರ ಹಾಗೂ ಹಳೇಹುಬ್ಬಳ್ಳಿ ಚನ್ನಪೇಟೆ ಲತ್ತಿಪೇಟೆಯ ಕುಮಾರ ಎಂ. ಸುಣಗಾರ ಬಂಧಿತರಾಗಿದ್ದಾರೆ ಎಂದರು.
Related Articles
Advertisement
ನಾಲ್ಕು ಪ್ರಕರಣಕ್ಕೆ ಮೋಕ್ಷ:
ಎಚ್ಡಿಬಿಆರ್ಟಿಎಸ್ ಮಾರ್ಗದಲ್ಲಿ ಚಿಗರಿ ಬಸ್ ಹಾಗೂ ಆಂಬ್ಯುಲೆನ್ಸ್ ಸೇರಿದಂತೆ ಅಗತ್ಯ ವಾಹನ ಹೊರತುಪಡಿಸಿ ಇನ್ನಿತರೆ ವಾಹನಗಳು ಓಡಾಡುವಂತಿಲ್ಲ. ಅಂತಹ ವಾಹನಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು. ಹಗಲು ಹೊತ್ತಿನಲ್ಲಿ ಲಾರಿಗಳ ನಗರ ಪ್ರವೇಶ ನಿರ್ಬಂಧಕ್ಕೆ ಈಗಾಗಲೇ ಸೂಚನೆ ನೀಡಲಾಗಿದೆ. ಆಟೋ ರಿಕ್ಷಾಗಳಿಗೆ ಮೀಟರ್ ಕಡ್ಡಾಯಗೊಳಿಸಲಾಗಿದೆ. ಚುನಾವಣೆ ಹಿನ್ನೆಲೆಯಲ್ಲಿ ಇದನ್ನು ಕಾರ್ಯಗತಗೊಳಿಸಲು ಆಗಿರಲಿಲ್ಲ. ಈ ಕುರಿತು ಸಂಚಾರ ವಿಭಾಗದ ಡಿಸಿಪಿ, ಎಸಿಪಿ ಅವರೊಂದಿಗೆ ಚರ್ಚಿಸಿ ವಾರದೊಳಗೆ ಜಾರಿಗೊಳಿಸಲಾಗುವುದು. –ಎಂ.ಎನ್. ನಾಗರಾಜ, ಹು-ಧಾ ಪೊಲೀಸ್ ಆಯುಕ್ತ
ಕಾರ್ಯಾಚರಣೆ ನಡೆದಿದ್ದು ಹೇಗೆ?:
ಬಂಧಿತರು ನಗರದ ವಿವಿಧೆಡೆ ವಾಯುವಿಹಾರ ಮಾಡುತ್ತಿದ್ದ ವೃದ್ಧ ಮಹಿಳೆಯರನ್ನೇ ಗುರಿಯಾಗಿಸಿಕೊಂಡು ಸರಗಳ್ಳತನ ಮಾಡುತ್ತಿದ್ದರು. ಮಂಗಳವಾರ ಬೆಳಗ್ಗೆ ಶಿರೂರ ಪಾರ್ಕ್ನಲ್ಲಿ ಮಹಿಳೆಯೊಬ್ಬರ ಸರ ಕಿತ್ತುಕೊಂಡು ಬೈಕ್ನಲ್ಲಿ ಪರಾರಿಯಾಗುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಗಸ್ತಿನಲ್ಲಿದ್ದ ವಿದ್ಯಾನಗರ ಠಾಣೆ ಇನ್ಸ್ಪೆಕ್ಟರ್ ಆನಂದ ಒಣಕುದರೆ, ಪೇದೆಗಳಾದ ರಮೇಶ ಹಲ್ಲೆ, ಬಿ.ಎಸ್. ಹಚ್ಚಡದ, ಆರ್.ಎಂ. ಹೊರಟ್ಟಿ ಖದೀಮರನ್ನು ಬೆನ್ನಟ್ಟಿ ಹಿಡಿಯಲು ಮುಂದಾಗಿದ್ದರು. ಆಗ ಕಳ್ಳರು ಸಿಬ್ಬಂದಿ ಮೇಲೆ ಖಾರದ ಪುಡಿ ಎರಚಿ, ನೇಲ್ ಕಟರ್ನಲ್ಲಿದ್ದ ಸಣ್ಣ ಚಾಕುನಿಂದ ಹೆದರಿಸಿ ಪರಾರಿಯಾಗಲು ಯತ್ನಿಸಿದರು. ಆದರೂ ಸಿಬ್ಬಂದಿ ಎದೆಗುಂದದೆ ಇಬ್ಬರನ್ನು ರಾಜೀವನಗರದಲ್ಲಿ ಬೈಕ್ ಸಮೇತ ಬಂಧಿಸಿದರು.