Advertisement

ಜಾರ್ಖಂಡ್‌: ಪೊಲೀಸ್‌ ಸಿಬಂದಿಯನ್ನು ಇರಿದು ಕೊಂದ ಅಪರಿಚಿತ ಹಂತಕ

04:48 PM Aug 16, 2018 | udayavani editorial |

ಗಿರೀಧ್‌, ಜಾರ್ಖಂಡ್‌: ಪಲಮಾವು ಜಿಲ್ಲೆಯಲ್ಲಿ ಇಂದು ಮಫ್ತಿಯಲ್ಲಿದ್ದ ಪೊಲೀಸ್‌ ಕಾನ್‌ಸ್ಟೆಬಲ್‌ ರಾಜವಂಶ ರಾಮ್‌ ಎಂಬವರನ್ನು ಅಪರಿಚಿತ ವ್ಯಕ್ತಿಯೋರ್ವ ಇರಿದು ಕೊಂದಿರುವುದಾಗಿ ಹಿರಿಯ ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ.

Advertisement

ಹವಿಲ್ದಾರ್‌ ರಾಜವಂಶ ರಾಮ್‌ ಅವರನ್ನು ಟೌನ್‌ ಪೊಲೀಸ್‌ ಸ್ಟೇಶನ್‌ನಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಹುತ್ತಿ ಬಜಾರ್‌ ಹಾತ್‌ ಎಂಬಲ್ಲಿ ಅವರನ್ನು ಇಂದು ಬೆಳಗ್ಗೆ ಅಪರಿಚಿತನೋರ್ವ ಇರಿದು ಕೊಂದ ಎಂದು ಜಿಲ್ಲಾ ಎಸ್‌ಪಿ ಸುರೇಂದ್ರ ಕುಮಾರ್‌ ಝಾ ತಿಳಿಸಿದರು. 

ಕೊಲೆಗೀಡಾದ ರಾಜವಂಶ ರಾಮ್‌ ಅವರು ಬಿಹಾರದ ಸಸಾರಾಮ್‌ ನಿವಾಸಿ. ಇವರ ಕೊಲೆ ಹಿಂದಿನ ಉದ್ದೇಶ ಏನೆಂಬುದು ಗೊತ್ತಾಗಿಲ್ಲ. ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next