Advertisement

Gangolli ಪೊಲೀಸ್‌ ವಾಹನ ಪಲ್ಟಿ ; ಇಬ್ಬರಿಗೆ ಗಾಯ

11:03 PM Jul 08, 2024 | Team Udayavani |

ಗಂಗೊಳ್ಳಿ: ಕಳ್ಳತನ ಆರೋಪಿಯನ್ನು ಕುಂದಾಪುರಕ್ಕೆ ಮಹಜರಿಗೆ ಕರೆದುಕೊಂಡು ಬರುತ್ತಿದ್ದ ವಾಹನಕ್ಕೆ ಬೆಂಗಾವಲಾಗಿದ್ದ ಕಾರವಾರ ಠಾಣೆ ಪೊಲೀಸರ ವಾಹನ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಚಾಲಕ ಸಹಿತ ಇಬ್ಬರು ಗಾಯಗೊಂಡ ಘಟನೆ ಮುಳ್ಳಿಕಟ್ಟೆಯ ಹೆದ್ದಾರಿಯಲ್ಲಿ ಸೋಮವಾರ ಬೆಳಗ್ಗೆ 11.30ರ ಸುಮಾರಿಗೆ ಸಂಭವಿಸಿದೆ.

Advertisement

ಕಳವು ಆರೋಪಿ ಸಿರಿರಾಜ್‌ ಕಾನೋಜಿ ಎಂಬಾತನನ್ನು ಸ್ಥಳ ಮಹಜರಿಗೆ ಕುಂದಾಪುರಕ್ಕೆ ಕಾರವಾರ ಠಾಣೆಯ ಎಸ್‌ಐ ರಮೇಶ್‌ ನೇತೃತ್ವದ ತಂಡ ಇನ್ನೊಂದು ವಾಹನದಲ್ಲಿ ಕರೆದುಕೊಂಡು ಬರುತ್ತಿದ್ದರು. ಬೆಂಗವಲಾಗಿ ಬರುತ್ತಿದ್ದ ಇಲಾಖಾ ವಾಹನವು ಮುಳ್ಳಿಕಟ್ಟೆ ಜಂಕ್ಷನ್‌ ಸಮೀಪ ಬಂದಾಗ ವಾಹನದಲ್ಲಿ ಏನೋ ಶಬ್ದ ಬಂದಿದ್ದು, ಚಾಲಕ ಮಹೇಶ್‌ ಸ್ಟೇರಿಂಗ್‌ ನಿಯಂತ್ರಣಕ್ಕೆ ಪ್ರಯತ್ನಿಸಿದರೂ ನಿಯಂತ್ರಣಕ್ಕೆ ಸಿಗದೆ ಸ್ವಲ್ಪ ಮುಂದಕ್ಕೆ ಹೋಗಿ ಬಿದ್ದಿದೆ.

ಪೊಲೀಸ್‌ ಸಿಬಂದಿ ಮಾರುತಿ ಅಪ್ಪು, ಚಾಲಕ ಮಹೇಶ್‌ ಅವರಿಗೂ ಗಾಯವಾಗಿದೆ. ಇನ್ನಿಬ್ಬರು ಪಾರಾಗಿದ್ದಾರೆ. ಕಾರವಾರ ಎಸ್‌ಐ ರಮೇಶ್‌ ನೀಡಿದ ದೂರಿನಂತೆ ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next