Advertisement

Charmadi Ghat ರಸ್ತೆಯಲ್ಲಿ ಪೊಲೀಸ್‌ ಗಸ್ತು: ಪ್ರವಾಸಿಗರ ಮೋಜು ನಿಯಂತ್ರಣಕ್ಕೆ ಕಣ್ಗಾವಲು

11:43 PM Jul 07, 2024 | Team Udayavani |

ಬೆಳ್ತಂಗಡಿ: ಚಾರ್ಮಾಡಿ ಘಾಟಿಯಲ್ಲಿ ಸಂಚಾರಕ್ಕೆ ಅಡಚಣೆ ಉಂಟಾಗದಂತೆ ಹಾಗೂ ಪ್ರವಾಸಿಗರ ಮೋಜು ಮಸ್ತಿಗೆ ಕಡಿವಾಣ ಹಾಕಲು ಮೂಡಿಗೆರೆ ವ್ಯಾಪ್ತಿಯ ಹೈವೇ ಪಟ್ರೋಲ್‌ ಪೊಲೀಸರು ಗಸ್ತು ಆರಂಭಿಸಿದ್ದಾರೆ.

Advertisement

ಘಾಟಿಯಲ್ಲಿ ಮಳೆಯಿಂದ ಜಲಪಾತಗಳು ಮೈದುಂಬಿಕೊಂಡಿದ್ದು, ಈ ಭಾಗದಲ್ಲಿ ವಾಹನಗಳನ್ನು ರಸ್ತೆಯು ದ್ದಕ್ಕೂ ನಿಲ್ಲಿಸುವುದರಿಂದ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿತ್ತು. ಜತೆಗೆ ಘಾಟಿಯ ಅಪಾಯಕಾರಿ ತೊರೆ, ಹಳ್ಳಗಳಲ್ಲಿ ಇಳಿಯುವ ಕಲ್ಲು, ಬಂಡೆ, ತಡೆಗೋಡೆ ಏರುವ ಪ್ರವಾಸಿಗರು, ರಸ್ತೆ ಮಧ್ಯೆಯೇ ಫೋಟೋ ಕ್ಲಿಕ್ಕಿಸುವ ಮಂದಿ ಅಪಾಯವನ್ನು ಆಹ್ವಾನಿಸಿಕೊಳ್ಳುವುದು ಕೆಲವು ದಿನಗಳಿಂದ ನಡೆಯುತ್ತಿದೆ. ಈ ಬಗ್ಗೆ ಪತ್ರಿಕೆಯು ವರದಿ ಪ್ರಕಟಿಸಿತ್ತು.

ಪೊಲೀಸ್‌ ಗಸ್ತು
ಘಾಟಿಯಲ್ಲಿ ಪ್ರವಾಸಿ ಗರಿಂದ ವಾಹನ ಸವಾರರಿಗೆ ಉಂಟಾಗುವ ತೊಂದರೆ ಹಾಗೂ ಕೆಲವು ಪ್ರವಾಸಿಗರ ಎಲ್ಲೆ ಮೀರಿದ ಮೋಜು-ಮಸ್ತಿಗೆ ಕಡಿವಾಣ ಹಾಕಲು ಹೈವೇ ಪೊಲೀಸ್‌ ಪಟ್ರೋಲ್‌ ಗಸ್ತುಆರಂಭಿಸಿದೆ. ಪ್ರವಾಸಿಗರಿಗೆ ಎಚ್ಚರಿಕೆನೀಡುತ್ತಾ ಅಲ್ಲಲ್ಲಿ ವಾಹನ ನಿಲ್ಲಿಸ ದಂತೆ ಹಾಗೂ ಅಪಾಯಕಾರಿ ಸ್ಥಳಗಳಿಗೆ ಇಳಿಯದಂತೆ ಸೂಚನೆ ನೀಡಲಾಗುತ್ತಿದೆ. ಈ ವಾಹನ ಚಿಕ್ಕಮಗಳೂರು ಘಾಟಿ ವಿಭಾಗದಲ್ಲಿ ನಿರಂತರವಾಗಿ ಸುತ್ತಾಡಿ ನಿಗಾ ಇರಿಸುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next