Advertisement

ಗಲಭೆ ಹಿನ್ನೆಲೆ ಹುಬ್ಬಳ್ಳಿಯಲ್ಲಿ ಪೊಲೀಸ್ ಪಥಸಂಚಲನ; ಕಟ್ಟೆಚ್ಚರ

06:05 PM Apr 17, 2022 | Team Udayavani |

ಹುಬ್ಬಳ್ಳಿ: ಗಲಭೆಗೆ ಗುರಿಯಾಗಿದ್ದ ಹುಬ್ಬಳ್ಳಿಯ ವಿವಿಧ ಪ್ರದೇಶಗಳಲ್ಲಿ ಪೊಲೀಸರು ರವಿವಾರ ಸಂಜೆ ಪಥಸಂಚಲನ ನಡೆಸಿದರು.

Advertisement

ಸಾರ್ವಜನಿಕರಲ್ಲಿ ಅಸತ್ಮಸ್ಥೈರ್ಯ ತುಂಬಲು ಹಾಗೂ ದುಷ್ಟ ಶಕ್ತಿಗಳಿಗೆ ಭಯ ಮೂಡಿಸಲು ಪಥಸಂಚಲನ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯಿಂದ ಹಿರೇಪೇಟೆ, ಬೀರಬಂದ ಓಣಿ, ಜಂಗ್ಲಿಪೇಟೆ, ಅಕ್ಕಿಪೇಟೆ, ಮಸ್ತಾನ ಸೋಪಾ, ಕಸಬಾಪೇಟೆ ರಸ್ತೆ, ಮ್ಯಾದಾರ ಓಣಿ, ನ್ಯೂ ಇಂಗ್ಲೀಷ್ ಸ್ಕೂಲ್, ದುರ್ಗದ ಬಯಲು, ಮರಾಠಿ ಗಲ್ಲಿ, ಗಣೇಶ ಪೇಟೆ ವೃತ್ತ ವರೆಗೆ ಪಥಸಂಚಲನ ನಡೆಸಿದರು.

ವಿವಾದಾತ್ಮಕ ಪೋಸ್ಟ್ ವಿಷಯವಾಗಿ ಹಳೇಹುಬ್ಬಳ್ಳಿ ಠಾಣೆಯ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿ ಗಲಭೆ ಎಬ್ಬಿಸಲಾಗಿತ್ತು. ಹಲವು ಕಿಡಿಗೇಡಿಗಳು ತಲೆಮರೆಸಿಕೊಂಡಿದ್ದು, ಪೊಲೀಸರು ಮನೆ ಮನೆಗೆ ತೆರಳಿ ತಪಾಸಣೆ ನಡೆಸುತ್ತಿದ್ದಾರೆ. ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯಾವಳಿಗಳನ್ನು ಆಧರಿಸಿ ಕಿಡಿಗೇಡಿಗಳು ಗಲಭೆ ವೇಳೆ ಬಳಸಿದ್ದ ಹಲವು ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ಇದುವರೆಗೆ 46 ಜನರನ್ನು ವಶಕ್ಕೆ ಪಡೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next