Advertisement

ಪೊಲೀಸ್‌ ತನಿಖೆ ಚುರುಕು;  ಸಿ.ಸಿ. ಕೆಮರಾ ಪರಿಶೀಲನೆ

08:38 AM Apr 02, 2018 | Team Udayavani |

ಮಂಗಳೂರು: ಬಾಡಿಗೆಗೆ ಕಾರು ಗೊತ್ತುಪಡಿಸಿದ ಅಪರಿಚಿತರು ಚಾಲಕನನ್ನು ಕೈಕಾಲು ಕಟ್ಟಿ ಹೆಬ್ರಿ ಸಮೀಪ ಎಸೆದು ಹೋದ ಪ್ರಕರಣವೊಂದು ನಡೆದಿದ್ದು, ಈ ಬಗ್ಗೆ ಬರ್ಕೆ ಪೊಲೀಸರು ಸುರತ್ಕಲ್‌ ಮತ್ತು ನಗರದ ಲಾಲ್‌ಬಾಗ್‌ನ ಸಾಯಿಬೀನ್‌ ಕಾಂಪ್ಲೆಕ್ಸ್‌ ಸೇರಿದಂತೆ ಹಲವು ಕಡೆ ಸಿಸಿ ಕೆಮರಾಗಳ ಪರಿಶೀಲನೆ ನಡೆಸಿದ್ದಾರೆ.

Advertisement

ಪುತ್ತೂರಿನ ಯುವಕ ಪ್ರಕಾಶ್‌ ಅವರು ಚಲಾಯಿಸುತ್ತಿದ್ದ ಉಬಾರ್‌ ಕಂಪೆನಿಯ ಕಾರನ್ನು ಅಪರಿಚಿತರು ಶುಕ್ರವಾರ ರಾತ್ರಿ ನಗರದ ಸಾಯಿಬೀನ್‌ ಕಾಂಪ್ಲೆಕ್ಸ್‌  ಬಳಿ ಪಡುಬಿದ್ರೆಗೆ ಹೋಗ ಬೇಕೆೆಂದು ಬಾಡಿಗೆ ಗೊತ್ತುಪಡಿಸಿ ಕರೆದೊಯ್ದಿದ್ದರು. ಆದರೆ ದಾರಿ ಮಧ್ಯೆ ಕಾರು ಚಲಾಯಿಸುತ್ತಿದ್ದ  ಪ್ರಕಾಶ್‌ ಅವರ ಮೇಲೆ ದಾಳಿ ನಡೆಸಿದ ಅಪರಿಚಿತರು, ಅವರ ಬಾಯಿಗೆ ಬಟ್ಟೆ ತುರುಕಿ ಕೈಕಾಲುಗಳನ್ನು ಕಟ್ಟಿ ಹೆಬ್ರಿಯ ಬಚ್ಚಪ್ಪುವಿನ ಅರಣ್ಯ ಭಾಗವಾದ ಸಾಂತೊಳ್ಳಿ ಕಾಡಿನಲ್ಲಿ ಎಸೆದು ಕಾರು ಹಾಗೂ 3 ಮೊಬೈಲ್‌ ಸಮೇತ ಪರಾರಿಯಾಗಿದ್ದರು. ಈ ಬಗ್ಗೆ ಬರ್ಕೆ ಪೊಲೀಸ್‌ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಾಗಿತ್ತು.

ಆರೋಪಿಗಳು ಹುಬ್ಬಳ್ಳಿಯವರು?
ರೋಪಿಗಳು ಹುಬ್ಬಳ್ಳಿ ಕನ್ನಡ ಮಾತನಾಡುತ್ತಿದ್ದರೆಂದು ಪ್ರಕಾಶ್‌ ಅವರು ನೀಡಿದ ಮಾಹಿತಿ ನೀಡಿದ್ದು, ಹಾಗಾಗಿ  ಆರೋಪಿಗಳು ಹುಬ್ಬಳ್ಳಿ ಕಡೆಯವರು ಆಗಿರಬಹುದೇ ಎಂಬ ಶಂಕೆ ವ್ಯಕ್ತವಾಗಿದೆ. ಕಾರು ಹೆಬ್ರಿಯಿಂದ ಯಾವ ದಾರಿಯಾಗಿ ಸಾಗಿದೆ ಎಂಬ ನಿಟ್ಟಿನಲ್ಲಿ ತನಿಖೆ ನಡೆಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next