Advertisement

ಕೇಸರಿ ಶಾಲಿನ ಚೀಲ ಕೊಂಡೊಯ್ಯಲು ಪೊಲೀಸರ ಅಡ್ಡಿ: ವಿಧಾನ ಪರಿಷತ್‌ ಸದಸ್ಯರ ಜಟಾಪಟಿ

10:24 PM Feb 29, 2024 | Team Udayavani |

ಬೆಂಗಳೂರು: ಕೇಸರಿ ಶಾಲುಗಳುಳ್ಳ ಚೀಲ ತೆಗೆದುಕೊಂಡು ಹೋಗಲು ವಿಧಾನಪರಿಷತ್‌ ಸದಸ್ಯರಿಗೆ ಪೊಲೀಸರು ತಡೆಯೊಡ್ಡಿದ ಪ್ರಸಂಗ ವಿಧಾನಸೌಧದ ನೆಲಮಹಡಿಯಲ್ಲಿ ನಡೆದಿದೆ.

Advertisement

ಬಿಜೆಪಿ ಶಾಸಕರು ವಿಧಾನಸೌಧದಿಂದ ರಾಜಭವನದವರೆಗೆ ಪಾದಯಾತ್ರೆ ನಡೆಸಿ, ರಾಜ್ಯಪಾಲರನ್ನು ಭೇಟಿ ಮಾಡಿ ರಾಜ್ಯ ಸರಕಾರದ ವಿರುದ್ಧ ದೂರು ಸಲ್ಲಿಸಲು ಮುಂದಾದರು. ಇದಕ್ಕಾಗಿ ಮೇಲ್ಮನೆಯ ಸದಸ್ಯರೆಲ್ಲರೂ ಕೇಸರಿ ಶಾಲು ಧರಿಸಿ ಹೋಗಲು ನಿರ್ಧರಿಸಿದ್ದರು. ಅದರಂತೆ ಅಪ್ತ ಸಹಾಯಕರ ಮೂಲಕ ಕೇಸರಿ ಶಾಲುಗಳುಳ್ಳ ಚೀಲವನ್ನು ತರಿಸಲಾಯಿತು. ತಪಾಸಣೆ ನಡೆಸಿದ ಪೊಲೀಸರು, ಕೇಸರಿ ಶಾಲನ್ನು ಒಳಗೆ ಬಿಡಲು ಅನುಮತಿ ನೀಡಲಿಲ್ಲ.

ಈ ವೇಳೆ ವಿಧಾನಪರಿಷತ್‌ ಬಿಜೆಪಿ ಸದಸ್ಯ ಕೇಶವಪ್ರಸಾದ್‌ ಅವರು ಚೀಲವನ್ನು ಪಡೆದು, ಒಳಹೋಗಲು ಪ್ರಯತ್ನಿಸಿದಾಗ ಪೊಲೀಸರು ತಡೆದು ನಿಲ್ಲಿಸಿದರು. ಆಗ ಪೊಲೀಸರನ್ನು ತರಾಟೆಗೆ ತೆಗೆದುಕೊಂಡರು. ಈ ವೇಳೆ ಮತ್ತೋರ್ವ ಶಾಸಕ ರಘುನಾಥರಾವ್‌ ಮಲ್ಕಾಪುರೆ ಕೂಡ ಆಗಮಿಸಿ, ಏನ್‌ ಮಾಡುತ್ತಾರೋ ಮಾಡಲಿ ಎಂದು ಚೀಲ ತೆಗೆದುಕೊಂಡು ಹೋಗಲು ಮುಂದಾದರು. ಆಗ ಮಾತಿನ ಚಕಮಕಿ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next