Advertisement

ಕಾಲಿಗೆ ಬಿದ್ದ   ಬಡ ಮಹಿಳೆ: ಇನ್‌ಸ್ಪೆಕ್ಟರ್‌ ವಜಾ 

12:13 AM Jan 21, 2019 | |

ಲಕ್ನೋ: ಮೊಮ್ಮಗನ ಸಾವಿಗೆ ಸಂಬಂಧಿಸಿ ಎಫ್ಐಆರ್‌ ದಾಖಲಿಸುವಂತೆ ಬ್ರಹ್ಮದೇವಿ (75) ಎಂಬ ಬಡ ಮಹಿಳೆಯೊಬ್ಬರು ಮಾಡಿದ ಮನವಿಯನ್ನು ಲೆಕ್ಕಿಸದೇ ಇದ್ದು, ಕೊನೆಗೆ ಆಕೆ ತನ್ನ ಕಾಲಿಗೆ ಬಿದ್ದು ಬೇಡಿಕೊಳ್ಳುವಂತೆ ಮಾಡಿದ ಉತ್ತರ ಪ್ರದೇಶದ ಗುಡಂಬಾ ಪೊಲೀಸ್‌ ಠಾಣೆ ಇನ್‌ಸ್ಪೆಕ್ಟರ್‌ ತೇಜ್‌ ಪ್ರಕಾಶ್‌ ಸಿಂಗ್‌ ಎಂಬವರನ್ನು ಆ ಹುದ್ದೆಯಿಂದ ವಜಾಗೊಳಿಸಿ ಅವರನ್ನು ಪೊಲೀಸ್‌ ಲೈನ್‌ ಸೇವೆಗೆ ನಿಯೋಜಿಸಲಾಗಿದೆ.

Advertisement

 ಲಕ್ನೋದ ಪ್ಲೆ „ವುಡ್‌ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಆಕಾಶ್‌ ಯಾದವ್‌ (20) ಎಂಬ ಬ್ರಹ್ಮದೇವಿಯ ಮೊಮ್ಮಗ ಕಾರ್ಖಾನೆಯಲ್ಲಿ ನಡೆದ ದುರ್ಘ‌ಟನೆಯಲ್ಲಿ ಸಾವಿಗೀಡಾಗಿದ್ದ. ಇದರ ದೂರನ್ನು ದಾಖಲಿಸಲು ಬಂದಿದ್ದ ಆಕೆಯನ್ನು ಅಲ್ಲಿನ ಅಧಿಕಾರಿ ಹೀನಾಯವಾಗಿ ನಡೆಸಿಕೊಂಡಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next