Advertisement

ಅಜ್ಜಿಗೆ ಧನ ಸಹಾಯ ಮಾಡಿ ಮಾನವೀಯತೆ ಮೆರೆದ ಪೊಲೀಸರು

11:02 AM May 10, 2021 | Team Udayavani |

ಅಥಣಿ: ಕೋವಿಡ್ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕರ್ಫ್ಯೂ ವಿಧಿಸಲಾಗಿದೆ. ವ್ಯಾಪಾರ ಇಲ್ಲದೆ ಅದೆಷ್ಟೋ ಸಣ್ಣಪುಟ್ಟ ವ್ಯಾಪಾರಸ್ಥರು ಒಂದು ತುತ್ತಿನ ಊಟಕ್ಕೂ ಪರದಾಡುವಂತಾಗಿದೆ. ಇದರ ಮಧ್ಯದಲ್ಲಿ ಪಟ್ಟಣದ ಬೆಣ್ಣೆ ಬಜಾರಿನಲ್ಲಿ ವ್ಯಾಪಾರ ಮಾಡುತ್ತಿದ್ದ ಇಳಿ ವಯಸ್ಸಿನ ಅಜ್ಜಿಗೆ ಪೊಲೀಸ್‌ ಸಿಬ್ಬಂದಿ ಹಣ ನೀಡಿ ಮಾನವೀಯತೆ ಮೆರೆದಿದ್ದಾರೆ.

Advertisement

ಅಜ್ಜಿ ಪ್ರತಿನಿತ್ಯವೂ ಪಟ್ಟಣದಲ್ಲಿ ಒಣಶುಂಠಿ ಮಾರಿ ಜೀವನ ನಿರ್ವಹಣೆ ಮಾಡುತ್ತಿದ್ದಾಳೆ. ಆದರೆ ಅಥಣಿ ವ್ಯಾಪಾರಸ್ಥರ ಸಂಘ ಸ್ವಯಂ ಪ್ರೇರಿತವಾಗಿ ವ್ಯಾಪಾರ ವಹಿವಾಟು ಬಂದ್‌ ಮಾಡಿ ಪಟ್ಟಣ ಸಂಪೂರ್ಣವಾಗಿ ಲಾಕ್‌ಡೌನ್‌ ಆಗಿದೆ. ಈ ಎಲ್ಲದರ ನಡುವೆಯೂ ಮುಂಜಾನೆ ಇಳಿ ವಯಸ್ಸಿನ ಅಜ್ಜಿ ವ್ಯಾಪಾರ ಮಾಡುವ ಸಂದರ್ಭದಲ್ಲಿ ಅಥಣಿ ಪೋಲಿಸರು ವಿನಮ್ರತೆಯಿಂದ ಸ್ವಲ್ಪ ಹಣ ನೀಡಿ ಅಜ್ಜಿಯನ್ನು ಮನೆಗೆ ಕಳಿಸಿದ್ದಾರೆ. ಅವರ ಈ ಮಾನವೀಯ ಕಾರ್ಯ ಪ್ರಶಂಸೆಗೆ ಕಾರಣವಾಗಿದ್ದು, ಸೋಷಿಯಲ್‌ ಮೀಡಿಯಾಗಳಲ್ಲಿ ಹರಿದಾಡುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next