Advertisement

ಕಬ್ಬನ್‌ಪಾರ್ಕ್‌:ಶ್ರೀಗಂಧ ಕಳ್ಳನಿಗೆ ಪೊಲೀಸರ ಗುಂಡೇಟು !

10:17 AM Dec 11, 2018 | Team Udayavani |

ಬೆಂಗಳೂರು: ಕಬ್ಬನ್‌ ಪಾರ್ಕ್‌ ಬಳಿ ಸೋಮವಾರ ತಡರಾತ್ರಿ ಶ್ರೀಗಂಧ ಕಳ್ಳನೊಬ್ಬನ ಮೇಲೆ ಪೊಲೀಸರು ಫೈರಿಂಗ್‌ ಮಾಡಿದ ಘಟನೆ ನಡೆದಿದೆ.

Advertisement

ಶ್ರೀಗಂಧ ಕಳ್ಳ ಮುಜಾಹಿದ್ದೀನ್‌ ಉಲ್ಫಾ ಎಂಬಾತನ ಬಂಧನಕ್ಕೆ ಕಬ್ಬನ್‌ ಪಾರ್ಕ್‌ ಠಾಣೆಯ 
ಪೊಲೀಸರು ಕಾರ್ಯಾಚರಣೆಗಿಳಿದಿದ್ದರು. ಈ ವೇಳೆ ಪಿಎಸ್‌ಐ ರಹೀಮ್‌ ಮತ್ತು ಪೇದೆ ಕೃಷ್ಣ ಮೂರ್ತಿ ಅವರ ಮೇಲೆ ಉಲ್ಫಾ ಮಾರಕಾಯುಧಗಳಿಂದ ದಾಳಿ ನಡೆಸಲು ಮುಂದಾಗಿದ್ದಾನೆ. 

ಕೂಡಲೆ ಇನ್ಸ್‌ಪೆಕ್ಟರ್‌ ಐಯ್ಯಣ್ಣ ರೆಡ್ಡಿ ಅವರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಶರಣಾಗದಿದ್ದಾಗ ಉಲ್ಫಾ ಕಾಲಿಗೆ ಗುಂಡು ಹಾರಿಸಿದ್ದಾರೆ.

ತಕ್ಷಣ ಆತನನ್ನು ವಶಕ್ಕೆ ಪಡೆದು ಬೌರಿಂಗ್‌ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಉಲ್ಫಾ ಶ್ರೀಗಂಧ ಕಳವು ಮಾಡಿ ತಮಿಳುನಾಡಿಗೆ ಸಾಗಾಟ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. 

Advertisement

ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತಿದೆ. 

Advertisement

Udayavani is now on Telegram. Click here to join our channel and stay updated with the latest news.

Next