Advertisement

ದಾವಣಗೆರೆಯಲ್ಲಿ ರೌಡಿಗಳ ಮೇಲೆ ಪೊಲೀಸ್‌ ಫೈರಿಂಗ್‌

12:01 PM Jan 24, 2018 | Team Udayavani |

ದಾವಣಗೆರೆ: ನಡು ಕರ್ನಾಟಕದ ಕೇಂದ್ರಬಿಂದು ದಾವಣಗೆರೆಯಲ್ಲಿ ಮಂಗಳವಾರ ಸಂಜೆ ಗುಂಡಿನ ಮೊರೆತ ಕೇಳಿ ಬಂದಿದೆ. ರೌಡಿಶೀಟರ್‌ಗಳನ್ನು ಬಂಧಿಸಲು ತೆರಳಿದ್ದ ಸಂದರ್ಭದಲ್ಲಿ ವಿದ್ಯಾನಗರ ಪೊಲೀಸ್‌ ಠಾಣೆ ಸಬ್‌ ಇನ್ಸ್‌ಪೆಕ್ಟರ್‌ ಎಂ. ಸಿದ್ದೇಶ್‌ ಮತ್ತು ಪೇದೆ ಚಂದ್ರಪ್ಪ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲಾಗಿದೆ. ಆಗ ಆತ್ಮರಕ್ಷಣೆಗಾಗಿ ಪಿಎಸ್‌ಐ ಸಿದ್ದೇಶ್‌ ರೌಡಿಶೀಟರ್‌
ಗಳಾದ ಸುನೀಲ್‌ ಮತ್ತು ಸತೀಶ್‌ ಮೇಲೆ ಫೈರಿಂಗ್‌ ಮಾಡಿದ್ದಾರೆ. ಆಗ ರೌಡಿಶೀಟರ್‌ಗಳ ಕಾಲಿಗೆ ಗುಂಡೇಟು ತಗುಲಿ, ಗಾಯವಾಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

Advertisement

ರೌಡಿಗಳು ಚಾಕುವಿನಿಂದ ನಡೆಸಿದ ಹಲ್ಲೆಯಿಂದ ಪಿಎಸ್‌ಐ ಸಿದ್ದೇಶ್‌ ಹಾಗೂ ಪೇದೆ ಚಂದ್ರಪ್ಪನ ಕೈಗೆ ಗಾಯವಾಗಿದ್ದು, ಇಬ್ಬರಿಗೂ ಚಿಕಿತ್ಸೆ ನೀಡಲಾಗಿದೆ. ಪೊಲೀಸರ ಮೇಲೆ ಹಲ್ಲೆ ನಡೆಸಿದ ರೌಡಿಗಳಲ್ಲಿ ಸತೀಶ್‌ ವಿರುದ್ಧ ಈಗಾಗಲೇ ಎರಡು ಕೊಲೆ
ಪ್ರಕರಣ, ಒಂದು ಕೊಲೆ ಯತ್ನದ ಕೇಸ್‌ ದಾಖಲಾಗಿವೆ ಎಂದು ಎಸ್‌ಪಿ ಡಾ.ಭೀಮಾಶಂಕರ್‌ ಎಸ್‌. ಗುಳೇದ್‌ ತಿಳಿಸಿದ್ದಾರೆ.
ನಗರದ ಬೈಪಾಸ್‌ ರಸ್ತೆಯಲ್ಲಿರುವ ರಾಜಸ್ತಾನಿ ಡಾಬಾದಲ್ಲಿ ಊಟ ಮಾಡುತ್ತಿದ್ದವರನ್ನು ನೋಡಿದ ಕಾರಣಕ್ಕೆ ತಳ್ಳುಗಾಡಿ ವ್ಯಾಪಾರಿ ರೇವಣಿ ನಾಯ್ಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿತ್ತು. ಈ ಪ್ರಕರಣದ ಪ್ರಮುಖ ಆರೋಪಿಗಳಾಗಿರುವ ಸುನೀಲ್‌, ಸತೀಶ್‌ ಕೆಎಚ್‌ಬಿ ಕಾಲೋನಿಯಲ್ಲಿ ದ್ದಾರೆಂಬ ಖಚಿತ ಮಾಹಿತಿ ಮೇರೆಗೆ ಪೊಲೀಸ್‌ ಸಿಬ್ಬಂದಿ ಸ್ಥಳಕ್ಕೆ ತೆರಳಿದ್ದರು. ಆರೋಪಿಗಳನ್ನು ವಶಕ್ಕೆ
ತೆಗೆದುಕೊಳ್ಳಲು ಮುಂದಾಗುತ್ತಿದ್ದಂತೆ ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ.  

Advertisement

Udayavani is now on Telegram. Click here to join our channel and stay updated with the latest news.

Next