Advertisement

ಕಲಬುರಗಿ:ರುಂಡ ಕತ್ತರಿಸಿ ಅಟ್ಟಹಾಸಗೈದವನ ಮೇಲೆ ಪೊಲೀಸ್‌ ಫೈರಿಂಗ್

10:50 AM Sep 16, 2018 | |

 ಕಲಬುರಗಿ: ಯುವಕನೊಬ್ಬನ ರುಂಡ ಕತ್ತರಿಸಿ ಬರ್ಬರವಾಗಿ ಹತ್ಯೆಗೈದು ಪರಾರಿಯಾಗಿದ್ದ ಆರೋಪಿ ಯೊಬ್ಬನ ಮೇಲೆ ಪೊಲೀಸರು ಗುಂಡು ಹಾರಿಸಿರುವ ಘಟನೆ ಆಳಂದ ತಾಲೂಕಿನ ಕೆರೆಭೋಸ್ಗಾ  ಬಳಿ  ನಡೆದಿದೆ. 

Advertisement

ನಾಗರಾಜ್‌ (24)ಎಂಬ ಆರೋಪಿಯ ಮೇಲೆ ಚೌಕ್‌ ಠಾಣೆಯ ಸಿಪಿಐ ಎಸ್‌.ಎಸ್‌.ಹಿರೇಮಠ ಗುಂಡು ಹಾರಿಸಿದ್ದಾರೆ. 

ಸೆಪ್ಟಂಬರ್‌ 11 ರಂದು ಸಿಧ್ದೋಜಿ ಎಂಬ ಯುವಕನನ್ನು ಹಣಕ್ಕಾಗಿ ಅಪಹರಿಸಿ ಅಲಗೋಡ್‌ ಗ್ರಾಮದ ಬಳಿ ಬರ್ಬರವಾಗಿ ಹತ್ಯೆಗೈದು ಬೀಸಾಡಿದ್ದ.

ಪೊಲೀಸರ ಮೇಲೆಯೇ ನಾಗರಾಜ್‌ ದಾಳಿ ಮಾಡಿದ್ದು  ಈ ವೇಳೆ ಗುಂಡು ಹಾರಿಸಿ ಆತನನ್ನು ವಶಕ್ಕೆ ಪಡೆದಿದ್ದಾರೆ. 

ಕಾರ್ಯಾಚರಣೆ ವೇಳೆ ಇಬ್ಬರು ಪೊಲೀಸ್‌ ಸಿಬಂದಿ ಗಾಯಗೊಂಡಿದ್ದಾರೆ. ಇಬ್ಬರನ್ನು ಮತ್ತು ಆರೋಪಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next