Advertisement

ಬೀದರ್ : ಕೋವಿಡ್ ಸೋಂಕಿನಿಂದ ಮುಖ್ಯ ಪೇದೆ ಸಾವು

07:44 PM Jul 06, 2021 | Team Udayavani |

ಬೀದರ: ಮಹಾಮಾರಿ ಕೋವಿಡ್ ಸೋಂಕಿನಿಂದ ಮಂಗಳವಾರ (ಜುಲೈ 06)  ಪೊಲೀಸ್ ಮುಖ್ಯ ಪೇದೆ ರಮೇಶ ಲಕ್ಷ್ಮಣ (45) ಮೃತ ಪಟ್ಟಿದ್ದಾರೆ.

Advertisement

ಧನ್ನೂರಾ  ಪೊಲೀಸ ಠಾಣೆ ವ್ಯಾಪ್ತಿಯಲ್ಲಿ 112 ತುರ್ತು ಸೇವಾ ವಾಹನ (ಇ.ಆರ್.ಎಸ್.ಎಸ್) ಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದರು. ಕೋವಿಡ್ ಪಾಸಿಟಿವ್ ಬಂದಿದ್ದರಿಂದ ಚಿಕಿತ್ಸೆಗಾಗಿ ಬ್ರಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದು, ಈ ವೇಳೆ ಹೃದಯಾಘಾತ ಸಂಭವಿಸಿದೆ.

ಬಸವಕಲ್ಯಾಣ ತಾಲೂಕಿನ ಧನ್ನೂರ್ ಗ್ರಾಮದ ಮೃತ ರಮೇಶ ಅವರ ಪತ್ನಿ ಸಹ ಪೇದೆಯಾಗಿದ್ದು, ಪತ್ನಿ, ಮೂವರು ಮಕ್ಕಳು ಇದ್ದಾರೆ.

ಇನ್ನು ಕೋವಿಡ್ ಮೊದಲ ಅಲೆ ವೇಳೆ ಖಟಕ ಚಿಂಚೋಳಿ ಪೊಲೀಸ್ ಠಾಣೆಯ ಪೇದೆ ಸಾವನ್ನಪ್ಪಿದ್ದರು.

ಬೀದರ ಜಿಲ್ಲೆಯಲ್ಲಿ ಮಂಗಳವಾರ 6 ಹೊಸ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಒಂದು ಸಾವು ಸಂಭವಿಸಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 24,209 ಮತ್ತು ಮೃತರ ಸಂಖ್ಯೆ 395ಕ್ಕೆ ಏರಿಕೆ ಆಗಿದೆ. ಇಂದು 8 ಜನರು ಚಿಕಿತ್ಸೆಯಿಂದ ಗುಣಮುಖರಾಗಿದ್ದು, ಈವರೆಗೆ 23,783 ಜನ ಗುಣಮುಖರಾದಂತಾಗಿದೆ. ಜಿಲ್ಲೆಯಲ್ಲಿ ಇನ್ನು 27 ಸಕ್ರೀಯ ಪ್ರಕರಣಗಳಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next