Advertisement

ಶಹಾಪುರ: ಬೈಕ್‌ ಸವಾರರಿಗೆ ಪೊಲೀಸರ ಲಾಠಿ ರುಚಿ

10:12 AM May 11, 2021 | Team Udayavani |

ಶಹಾಪುರ: ಸೋಮವಾರದಿಂದ ಕಠಿಣ ಕರ್ಫ್ಯೂ ಜಾರಿ ಹಿನ್ನೆಲೆ ಹೊಸ ಮಾರ್ಗಸೂಚಿಯಂತೆ ಪೊಲೀಸರು ಬೆಳ್ಳಂ ಬೆಳಗ್ಗೆ ನಗರದ ಪ್ರಮುಖ ರಸ್ತೆಗೆ ನಿಂತು ವಾಹನ ಸವಾರರನ್ನು ತಡೆದು ಪರಿಶೀಲಿಸಿ ವಾಹನ ವಶಕ್ಕೆ ಪಡೆದರು.

Advertisement

ಡಿವೈಎಸ್ಪಿ ವೆಂಕಟೇಶ ಉಗಿಬಂಡಿ ಲಾಠಿ ಹಿಡಿದು ಬಸವೇಶ್ವರ ವೃತ್ತದಲ್ಲಿ ನಿಂತು ವಾಹನ ತಡೆದು ಪರಿಶೀಲಿಸಿ ವಶಕ್ಕೆ ಪಡೆದರು. ಪಾರಾಗಲು ಯತ್ನಿಸಿದವರಿಗೆ ಲಾಠಿ ಬಿಸಿ ಮುಟ್ಟಿಸಿದರು. ಕೊರೊನಾ ಕರ್ಫ್ಯೂ ಕುರಿತು ಮಾಧ್ಯಮದ ಮೂಲಕ ಹಾಗೂ ಪೊಲೀಸ್‌ ಇಲಾಖೆ ಮೂಲಕ ಪ್ರಕಟಣೆ ಹೊರಡಿಸಿದ್ದರೂ ಜನರು ಬೆಳಗ್ಗೆ ತರಕಾರಿ, ದಿನಸಿಗಾಗಿ ಸಾಲುಗಟ್ಟಿ ವಾಹನದಲ್ಲಿ ಸಾಗುತ್ತಿರುವುದನ್ನು ಕಂಡ ಡಿವೈಎಸ್ಪಿ ಉಗಿಬಂಡಿ ಸ್ವತಃ ಲಾಠಿ ಹಿಡಿದು ರಸ್ತೆಗಿಳಿದು ಹತೋಟಿಗೆ ತಂದರು.

ಸುಖಾಸುಮ್ಮನೆ ಓಡಾಡುತ್ತಿದ್ದವರಿಗೆ ಪೊಲೀಸರು ಲಾಠಿ ರುಚಿ ತೋರಿಸಿದರು. ಒಟ್ಟು 150ಕ್ಕೂ ಹೆಚ್ಚು ವಾಹನ ವಶಕ್ಕೆ ಪಡೆದರು. ಈ ಸಂದರ್ಭದಲ್ಲಿ ಪಿಐ ಚನ್ನಯ್ಯ ಹಿರೇಮಠ, ಪಿಎಸ್‌ಐ ಶಾಮಸುಂದರ ನಾಯಕ, ಚಂದ್ರಕಾಂತ ಮೆಕಾಲೆ ಸೇರಿದಂತೆ ಪೊಲೀಸರು ರಾಜ್ಯ ಹೆದ್ದಾರಿ ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ಬಂದೋಬಸ್ತ್ ಕಲ್ಪಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next