Advertisement

ಬೆಳ್ತಂಗಡಿ : ಅನಗತ್ಯವಾಗಿ ಓಡಾಡುವ ಮಂದಿಗೆ ಪೊಲೀಸ್ ಲಾಠಿ ಬಿಸಿ

11:26 AM May 07, 2021 | Team Udayavani |

ಬೆಳ್ತಂಗಡಿ :  ದ.ಕ‌.ಜಿಲ್ಲೆಯಲ್ಲಿ ಸಂಪೂರ್ಣ ಲಾಕ್ ಡೌನ್ ಜಾರಿ ಹಿನ್ನಲೆ ಜಿಲ್ಲಾಡಳಿತದ ಕಠಿಣ ನಿಯಮದ ನಡುವೆಯೂ ರಸ್ತೆಯಲ್ಲಿ ತಿರುಗಾಡುತ್ತಿರುವ ಮಂದಿಗೆ ಬೆಳ್ತಂಗಡಿ ಪೊಲೀಸರು ಲಾಠಿ ಬಿಸಿ ತೋರಿಸಿದ್ದಾರೆ.

Advertisement

ಬೆಳ್ತಂಗಡಿ ಪೊಲೀಸ್ ಠಾಣೆ ಉಪನಿರೀಕ್ಷಕ ನಂದಕುಮಾರ್ ಎಂ.ಎಂ. ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಅನಗತ್ಯ ಸುತ್ತಾಟ ನಡೆಸಿದ ಮಂದಿಗೆ ಪೊಲೀಸರು ಲಾಠಿ ಬಿಸಿ ತೋರಿಸಿದರಲ್ಲದೆ ಮಾಸ್ಕ್ ರಹಿತ, ಸೀಟ್ ಬೆಲ್ಟ್ ಇಲ್ಲದೆ ಓಡಾಟ ನಡೆಸಿದವರಿಗೆ ದಂಡ ಕಟ್ಟೊಲಿಸಲಾಯಿತು.

ಪೊಲೀಸರ ಕಠಿಣ ಕ್ರಮದ ನಡುವೆಯೂ ವಿವಿಧ ಕಾರಣ ನೀಡಿ ತಿರುಗಾಡುತ್ತಿರುವ ಜನರು ಕಂಡುಬಂದರು. ಮುಂಜಾನೆ ಅತೀ ಹೆಚ್ಚು ಸರಕಾರಿ ಉದ್ಯೋಗಿಗಳು ಕೆಲಸಕ್ಕೆ ಹಾಜರಾಗುವ ಗಡಿಬಿಡಿಯಲ್ಲಿರುವುದು ಕಂಡುಬಂತು. ಹೀಗಾಗಿ ತಪಾಸಣೆ ವೇಳೆ ವಾಹನಗಳು ಸಾಲು ಸಾಲಾಗಿ ನಿಂತಿರುವುದು ಕಂಡು ಬಂತು.

ಕೋವಿಡ್ ನಿಯಮ ಪಾಲನೆ ಅನಿವಾರ್ಯ. ನಿರ್ಲಕ್ಷ್ಯ ವಹಿಸದವರ ಮೇಲೆ ಕಾನೂನು ಕ್ರಮ ವಹಿಸಲಾಗಿದೆ. ಮುಂಜಾನೆ ಚಿನ್ನಾಭರಣ ಮಳಿಗೆಯೊಂದು 6 ಗಂಟೆಗೆ ಶಟರ್ ಮುಚ್ಚಿ ವ್ಯಾಪಾರ ಮಾಡುತ್ತಿದ್ದು, ಈ ಕುರಿತು ಪ್ರಕರಣ ದಾಖಲಿಸಲಾಗಿದೆ ಎಂದು ಬೆಳ್ತಂಗಡಿ ಠಾಣೆ ಉಪನಿರೀಕ್ಷಕ ನಂದಕುಮಾರ್ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next