Advertisement

ಪೊಲೀಸರ ದಾಳಿ: ಏಳು ಜನರ ಬಂಧನ

02:38 PM Jul 03, 2019 | Team Udayavani |

ಗಂಗಾವತಿ: ಅಕ್ರಮ ಫಿಲ್ಟರ್‌ ಮರಳು ದಂಧೆ ನಡೆಸುವವರ ಮೇಲೆ ದಾಳಿ ನಡೆಸಿ ಅಕ್ರಮಕ್ಕೆ ಬಳಸುತ್ತಿದ್ದ ಜೆಸಿಬಿ ಯಂತ್ರ, 7 ಟ್ರ್ಯಾಕ್ಟರ್‌, ಒಂದು ಬುಲೆರೋ ವಾಹನ ಸಮೇತ 7 ಜನರನ್ನು ಬಂಧಿಸಲಾಗಿದೆ ಎಂದು ಡಿವೈಎಸ್‌ಪಿ ಚಂದ್ರಶೇಖರ ಪಾಟೀಲ ತಿಳಿಸಿದ್ದಾರೆ.

Advertisement

ತಾಲೂಕಿನ ವೆಂಕಟಗಿರಿ ಬಂಡ್ರಾಳ ಮಧ್ಯೆ ಉಪ್ಪಾರ ಬಸಪ್ಪ ಎಂಬುವವರ ಹೊಲದಲ್ಲಿ ಹಲವು ತಿಂಗಳಿಂದ ಅಕ್ರಮವಾಗಿ ಫಿಲ್ಟರ್‌ ಮರಳು ತಯಾರಿಸಿ ಮಾರಾಟ ಮಾಡಲಾಗುತ್ತಿತ್ತು.

ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಅಕ್ರಮ ನಡೆಸುತ್ತಿದ್ದ ಜಾಗ ಪತ್ತೆ ಮಾಡಿ ರವಿವಾರ ರಾತ್ರಿ ದಾಳಿ ನಡೆಸಲಾಗಿದೆ. ಟ್ರ್ಯಾಕ್ಟರ್‌, ಜೆಸಿಬಿ ಹಾಗೂ ಬುಲೆರೋ ವಾಹನ ವಶಕ್ಕೆ ಪಡೆಯಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ವಶಕ್ಕೆ ಒಪ್ಪಿಸಲಾಗಿದೆ ಎಂದು ತಿಳಿಸಿದರು.

ದಾಳಿಯಲ್ಲಿ ಗ್ರಾಮೀಣ ಸಿಪಿಐ ದೀಪಕ ಭೂಸರಡ್ಡಿ, ಪಿಎಸ್‌ವೈ ಪ್ರಕಾಶ ಮಾಳೆ ಸೇರಿ ಹಲವು ಪೊಲೀಸರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next