Advertisement

Siddapura ಇಸ್ಪೀಟ್ ಅಡ್ಡೆ ಮೇಲೆ ಪೊಲೀಸರ ದಾಳಿ; ಆರೋಪಿಗಳ ಬಂಧನ

11:27 PM Aug 18, 2024 | Team Udayavani |

ಸಿದ್ದಾಪುರ: ಅಂಪಾರಿನ ಸರಕಾರಿ ಹಾಡಿಯಲ್ಲಿ ಹಣವನ್ನು ಪಣವಾಗಿಟ್ಟು ಇಸ್ಪೀಟ್‌ ಜುಗಾರಿ ಆಡುತ್ತಿರುವ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಶಂಕರನಾರಾಯಣ ಠಾಣೆಯ ಪೊಲೀಸ್‌ ಉಪನಿರೀಕ್ಷಕ ನಾಸೀರ್‌ ಹುಸೇನ್‌ ಅವರು ದಾಳಿ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದರು.

Advertisement

ಸ್ಥಳೀಯರಾದ ವಿಜಯಕರ (48), ಮಂಜುನಾಥ (48) ಶಂಕರನಾರಾಯಣ, ಉಮೇಶ್‌ (39), ಸಂತೋಷ್‌ (45), ರಮೇಶ (48)ಅವರನ್ನು ವಶಕ್ಕೆ ಪಡೆದರು.

ಆರೋಪಿಗಳ ಬಳಿ ಇದ್ದ ನಗದು 2,720 ರೂ. ಮತ್ತು ಇಸ್ಪೀಟ್‌ ಜುಗಾರಿಗೆ ಬಳಸಿದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next