Advertisement

ಕೇರಳ ಸಿಎಂ ಕೊಠಡಿಗೆ ನುಗ್ಗಲು ಯತ್ನಿಸಿದವನ‌ ಬಂಧನ

03:18 PM Aug 05, 2018 | Team Udayavani |

ಹೊಸದಿಲ್ಲಿ:  ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಇದ್ದ ಕೇರಳ ಭವನದ  ಕೊಠಡಿಗೆ ವ್ಯಕ್ತಿಯೊಬ್ಬ ಚೂರಿ ಹಿಡಿದುಕೊಂಡು ನುಗ್ಗಲು ಯತ್ನಿಸಿದ್ದಾನೆ.  ಈತನನ್ನು ಆಲಪ್ಪುಳ ಜಿಲ್ಲೆಯ ಚೆಟ್ಟಿಕುಲಂಗರ ಮೂಲದ ವಿಮಲ್‌ರಾಜ್‌ ಎಂದು ಗುರುತಿಸಲಾಗಿದೆ. ಅಲ್ಲಿ ಇದ್ದ ಪತ್ರಕರ್ತರು ಮತ್ತು ಇತರರು ಆತನನ್ನು ಹಿಡಿಯಲು ಪ್ರಯತ್ನಿಸಿ ದರಾರದೂ ಯಶಸ್ವಿಯಾಗಲಿಲ್ಲ. ಮುಖ್ಯಮಂತ್ರಿ ಭದ್ರತಾ ಸಿಬಂದಿ ಆತನನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.  ಹೊಸದಿಲ್ಲಿ ಯಲ್ಲಿ ನಡೆಯುತ್ತಿರುವ ಸಿಪಿಎಂ ಪಾಲಿಟ್‌ಬ್ಯೂರೋ ಸಭೆಯಲ್ಲಿ ಭಾಗವಹಿಸಲು ವಿಜಯನ್‌ ಶನಿವಾರ ರಾಷ್ಟ್ರ ರಾಜಧಾನಿಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ವಿಜಯನ್‌ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. 

Advertisement

ಸದ್ಯ ಪೊಲೀಸರ ವಶದಲ್ಲಿರುವಾತ ಹೊಸದಿಲ್ಲಿಯಲ್ಲಿಯೇ ನೆಲೆಸಿದ್ದಾನೆ. ಆತ ಮಾನಸಿಕವಾಗಿ ಅಸ್ವಸ್ಥ ಎಂದು ಮೂಲಗಳು ಹೇಳಿವೆ. ಈ ಹಿಂದೆ ಕೂಡ ಆತ ಮುಖ್ಯಮಂತ್ರಿಗೆ ಬೆದರಿಕೆ ಕರೆ ಮಾಡಿದ್ದ. ಉದ್ಯೋಗ ಸಿಗದೇ ಇದ್ದುದರಿಂದ ಆತ ವಿಜಯನ್‌ ಎದುರು ಆತ್ಮಹತ್ಯೆ ನಡೆಸಲು ಮುಂದಾಗಿದ್ದ. ಪೊಲೀಸರು ಆತನ ವಿಚಾರಣೆ ನಡೆಸಿದ್ದಾರೆ. ವಿಜಯನ್‌ ಮೇಲಿನ ದಾಳಿ ಯತ್ನವನ್ನು ಕಾಂಗ್ರೆಸ್‌ ಖಂಡಿಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next