Advertisement

ಕವಿದನಿ 23- ಸು.ರಂ. ಎಕ್ಕುಂಡಿ ವಿಶೇಷ

03:13 PM Nov 04, 2017 | |

ಹೊಂಬಾಳೆ ಪ್ರತಿಭಾರಂಗ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಡೆಯುವ “ಕವಿದನಿ’ ತಿಂಗಳ ಕಾರ್ಯಕ್ರಮದಲ್ಲಿ ಈ ಬಾರಿ ಖ್ಯಾತ ಕವಿ ಸುಬ್ಬಣ್ಣ ರಂಗನಾಥ ಎಕ್ಕುಂಡಿ ಅವರ ಕವಿತೆಗಳ ಓದು, ಗಮಕ, ಗಾಯನ ನಡೆಯಲಿದೆ.

Advertisement

ಸಂಸ್ಕೃತ ವಿ.ವಿ.ಯ ವಿಶ್ರಾಂತ ಕುಲಪತಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ, ಮಾಧ್ಯಮ ತಜ್ಞರಾದ ಜಿ.ಎನ್‌.ಮೋಹನ್‌ ಹಾಗೂ ಇಸ್ರೋ ಉಪಗ್ರಹಕೇಂದ್ರದ ನಿವೃತ್ತ ಉಪನಿರ್ದೇಕರಾದ ರಂಗನಾಥ ಸುಬ್ಬಣ್ಣ ಎಕ್ಕುಂಡಿ ಕವಿತೆಗಳನ್ನು ವಾಚಿಸಲಿದ್ದಾರೆ.

ಗರ್ತಿಕೆರೆ ರಾಘಣ್ಣ ಅವರಿಂದ ಗಾಯನ ಹಾಗೂ ಎಚ್‌.ಉಷಾ ಅವರಿಂದ ಗಮಕ ವಾಚನ ನಡೆಯಲಿದೆ. ಎಸ್‌. ಮಧುಸೂದನ ಹಾಗೂ ಎಲ್‌.ಎನ್‌.ವಸಂತಕುಮಾರ್‌ ವಾದ್ಯ ಸಹಕಾರ ನೀಡಲಿದ್ದಾರೆ. ಪ್ರೊ. ಜಿ. ಅಶ್ವತ್ಥ ನಾರಾಯಣ, ಎಂ.ಆರ್‌. ಸತ್ಯನಾರಾಯಣ, ಡಾ.ಎಂ.ಎಸ್‌. ಮೂರ್ತಿ, ಮಂ.ಅ.ವೆಂಕಟೇಶ್‌ ಭಾಗವಹಿಸಲಿದ್ದಾರೆ. 

ಎಲ್ಲಿ?: ನಯನ ಸಭಾಂಗಣ, ಜೆ.ಸಿ. ರಸ್ತೆ
ಯಾವಾಗ?: ನವೆಂಬರ್‌ 5, ಬೆಳಗ್ಗೆ 11 

Advertisement

Udayavani is now on Telegram. Click here to join our channel and stay updated with the latest news.

Next