Advertisement

8 ಕೋಟಿ ಜನರನ್ನು ತಲುಪಲಿದೆ ಉಜ್ವಲ

01:18 AM Sep 07, 2019 | mahesh |

ನವದೆಹಲಿ: ಬಡವರಿಗೆ ಉಚಿತವಾಗಿ ಅಡುಗೆ ಅನಿಲ ಸಂಪರ್ಕ ಒದಗಿಸುವ ಯೋಜನೆ ನಿರೀಕ್ಷೆಗೂ ಮೀರಿ 8 ಕೋಟಿ ಫ‌ಲಾನುಭವಿಗಳನ್ನು ಹೊಂದಲಿದ್ದು, 8 ಕೋಟಿ ಗುರಿಯ ಪೈಕಿ ಕೊನೆಯ ಎಲ್ಪಿಜಿ ಸಿಲಿಂಡರ್‌ ಅನ್ನು ಪ್ರಧಾನಿ ನರೇಂದ್ರ ಮೋದಿ ಫ‌ಲಾನುಭವಿಗೆ ಹಸ್ತಾಂತರಿಸಲಿದ್ದಾರೆ.

Advertisement

2016 ಮೇ 1 ರಂದು ಪ್ರಧಾನ ಮಂತ್ರಿ ಉಜ್ವಲ ಯೋಜನೆ ಪರಿಚಯಿಸಿದಾಗ 2019 ಮಾರ್ಚ್‌ ವೇಳೆಗೆ 5 ಕೋಟಿ ಸಂಪರ್ಕವನ್ನು ನೀಡುವ ಗುರಿ ಹಮ್ಮಿಕೊಳ್ಳಲಾಗಿತ್ತು. ಆದರೆ ಈ ಗುರಿಯನ್ನೂ ಮೀರಿ 8 ಕೋಟಿ ಸಂಪರ್ಕಗಳನ್ನು ನೀಡಲಾಗುತ್ತಿದೆ. ಈ ಸಂಬಂಧ ಮಹಾರಾಷ್ಟ್ರದ ಔರಂಗಾಬಾದ್‌ನ ಸೇಂದ್ರದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಇಲ್ಲಿ ಫ‌ಲಾನುಭವಿಗಳಿಗೆ ಮೋದಿ ಸಿಲಿಂಡರ್‌ ವಿತರಿಸಲಿದ್ದಾರೆ.

ಈ ಯೋಜನೆ ಅಡಿಯಲ್ಲಿ 1600 ರೂ. ಸಬ್ಸಿಡಿಯನ್ನು ಇಂಧನ ಕಂಪನಿಗಳಿಗೆ ಕೇಂದ್ರ ಸರ್ಕಾರ ತಲಾ ಸಂಪರ್ಕದ ಮೇಲೆ ಒದಗಿಸಲಿದೆ. ಇಂಧನ ಕಂಪನಿಗಳು ಬಡವರಿಗೆ ಉಚಿತವಾಗಿ ಸಂಪರ್ಕ ಒದಗಿಸಲಿವೆ. ಒಲೆ ಹಾಗೂ ಮೊದಲ ಮರುಪೂರಣದ ಹಣವನ್ನು ಮಾತ್ರ ಫ‌ಲಾನುಭವಿಗಳು ಭರಿಸಬೇಕಿರುತ್ತದೆ. ಬಡವರಿಗೆ ಹೊರೆ ಕಡಿಮೆ ಮಾಡಲು 5 ಕಿಲೋ ಸಿಲಿಂಡರ್‌ ಖರೀದಿಸುವ ಆಯ್ಕೆಯನ್ನೂ ಸರ್ಕಾರ ಒದಗಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next