Advertisement

ಗೋರಕ್ಷಣೆ ಹೆಸರಲ್ಲಿ ಹಿಂಸೆ: ಕಠಿಣ ಕ್ರಮಕ್ಕೆ ರಾಜ್ಯಗಳಿಗೆ ಮೋದಿ ಕರೆ 

02:31 PM Jul 16, 2017 | |

ಹೊಸದಿಲ್ಲಿ: ಗೋರಕ್ಷಣೆ ಹೆಸರಿನಲ್ಲಿ ಕಾನೂನು ಕೈಗೆತ್ತಿಕೊಂಡು ಹಿಂಸೆ ನಡೆಸುವವರ ರಾಜ್ಯ ಸರ್ಕಾರಗಳು ಕಠಿಣ ಕ್ರಮಕೈಗೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಭಾನುವಾರಒತ್ತಾಯಿಸಿದ್ದಾರೆ. 

Advertisement

ದೆಹಲಿಯಲ್ಲಿ ನಡೆದ ಸರ್ವಪಕ್ಷ ಸಭೆಗಳ ಬಳಿಕ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದ ಕೇಂದ್ರ ಸಚಿವರಾದ ಅನಂತ್‌ಕುಮಾರ್‌ ,ಮುಕ್ತಾರ್‌ ಅಬ್ಬಾಸ್‌ ನಖ್ವಿ ಅವರು ಮಾಧ್ಯಮಗಳಿಗೆ ಈ ಮಾಹಿತಿ ನೀಡಿದ್ದಾರೆ.

ಸರ್ವಪಕ್ಷ ಸಭೆಯಲ್ಲಿ ಗೋರಕ್ಷಣೆಯ ವಿಚಾರದಲ್ಲಿ ಹಿಂಸಾಚಾರಗಳು ನಡೆಯುವುದನ್ನು ರಾಜಕೀಯಗೊಳಿಸಬೇಡಿ ,ಕೋಮು ಬಣ್ಣ ನೀಡಬೇಡಿ . ಇದರಿಂದದೇಶಕ್ಕೆ ಯಾವುದೇ ಲಾಭವಿಲ್ಲ ಎಂದು ಪ್ರಧಾನಿ ಸರ್ವಪಕ್ಷ ನಾಯಕರ ಬಳಿ ಮನವಿ ಮಾಡಿರುವುದಾಗಿ ತಿಳಿಸಿದರು.

ಈ ಹಿಂದೆಯೂ ಗೋರಕ್ಷಣೆ ಹೆಸರಲ್ಲಿ ದಾಳಿ ನಡೆಸಿ ಹಲ್ಲೆ, ಹತ್ಯೆ ಮಾಡುವವರ  ವಿರುದ್ಧ ಕಠಿಣ ಕ್ರಮಕ್ಕೆ ಮೋದಿ ಕರೆ ನೀಡಿದ್ದರು. 

 ಸಭೆಯಲ್ಲಿ ಅಸ್ಸಾಂನ ನೆರೆ ಪರಿಸ್ಥಿತಿಯ ಬಗ್ಗೆ ಚರ್ಚೆ ನಡೆಸಲಾಯಿತು. ಸಭೆಗೆ ಜೆಡಿಯು ಮತ್ತು ಟಿಎಂಸಿ ಗೈರಾಗಿತ್ತು. 

Advertisement
Advertisement

Udayavani is now on Telegram. Click here to join our channel and stay updated with the latest news.

Next