Advertisement

ತೌಕ್ತೇ ಹಾನಿ: ಮೇ 19ರಂದು ಗುಜರಾತ್, ದಿಯು ಪ್ರದೇಶದಲ್ಲಿ ಪ್ರಧಾನಿ ವೈಮಾನಿಕ ಸಮೀಕ್ಷೆ

10:49 AM May 19, 2021 | Nagendra Trasi |

ನವದೆಹಲಿ: ತೌಕ್ತೇ ಚಂಡಮಾರುತದಿಂದ ಸಂಭವಿಸಿದ ಪರಿಸ್ಥಿತಿ ಮತ್ತು ಹಾನಿಯನ್ನು ಪರಿಶೀಲಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ(ಮೇ 19) ಗುಜರಾತ್ ಮತ್ತು ದಿಯು ಪ್ರದೇಶದಲ್ಲಿ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ ಎಂದು ವರದಿ ತಿಳಿಸಿದೆ.

Advertisement

ತೌಕ್ತೇ ಚಂಡಮಾರುತದಿಂದ ಹಾನಿಗೊಳಗಾದ ಅಮ್ರೇಲಿ, ಗಿರ್ ಸೋಮ್ ನಾಥ್ ಮತ್ತು ಭಾವ್ ನಗರ್ ಜಿಲ್ಲೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ವೈಮಾನಿಕ ಸಮೀಕ್ಷೆ ನಡೆಸುವ ಮೂಲಕ ಪರಿಶೀಲಿಸಲಿದ್ದಾರೆ ಎಂದು ವರದಿ ವಿವರಿಸಿದೆ.

ಗುಜರಾತ್ ಕರಾವಳಿ ಪ್ರದೇಶಕ್ಕೆ ತೌಕ್ತೇ ಚಂಡಮಾರುತ ಸೋಮವಾರ ರಾತ್ರಿ ಅಪ್ಪಳಿಸಿತ್ತು. ಇದರಿಂದ ಗುಜರಾತ್, ದಿಯು ಪ್ರದೇಶದ ಕರಾವಳಿ ಪ್ರದೇಶದಲ್ಲಿ ಅಪಾರ ಹಾನಿ ಸಂಭವಿಸಿತ್ತು.

ವೈಮಾನಿಕ ಸಮೀಕ್ಷೆ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಅಹಮದಾಬಾದ್ ನಲ್ಲಿ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಮತ್ತು ಹಿರಿಯ ಅಧಿಕಾರಿಗಳ ಜತೆ ಪರಿಶೀಲನಾ ಸಭೆ ನಡೆಸಲಿದ್ದಾರೆ ಎಂದು ಗುಜರಾತ್ ಮುಖ್ಯಮಂತ್ರಿ ಕಚೇರಿ ಟ್ವೀಟ್ ನಲ್ಲಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next