Advertisement

ಮೀನುಗಾರರಿಗೆ ಬಂಪರ್‌ ಕೊಡುಗೆ: ಮತ್ಸ್ಯ ಸಂಪದ ಯೋಜನೆಗೆ ಪ್ರಧಾನಿ ಚಾಲನೆ

12:17 AM Sep 11, 2020 | mahesh |

ಹೊಸದಿಲ್ಲಿ: ಮೀನುಗಾರಿಕೆ ಕ್ಷೇತ್ರದಲ್ಲಿ ಕ್ರಾಂತಿಕಾರಕ ಹೆಜ್ಜೆ ಎಂದೇ ಬಣ್ಣಿಸಲಾಗಿರುವ ಮತ್ಸ್ಯ ಸಂಪದ ಯೋಜನೆಗೆ ಪ್ರಧಾನಿ ಮೋದಿ ಚಾಲನೆ ನೀಡಿದ್ದಾರೆ. ಮೀನುಗಾರಿಕೆ ಕ್ಷೇತ್ರವನ್ನೂ “ಆತ್ಮನಿರ್ಭರ’ಗೊಳಿಸ ಬೇಕು ಎಂಬ ಉದ್ದೇಶದಿಂದ ಸರಕಾರ ಈ ಯೋಜನೆಗೆ ಚಾಲನೆ ನೀಡಿದೆ. ಪಶುಗಳ ಆರೋಗ್ಯದ ಮೇಲೆ ನಿಗಾ ಇರಿಸುವ “ಇ-ಗೋಪಾಲ್‌’ ಆ್ಯಪ್ ಗೂ ಚಾಲನೆ ಸಿಕ್ಕಿದೆ.

Advertisement

ಮುಂದಿನ ನಾಲ್ಕೈದು ವರ್ಷ ಗಳಲ್ಲಿ ಮತ್ಸ್ಯ ಸಂಪದ ಯೋಜನೆಗೆ 20 ಸಾವಿರ ಕೋ. ರೂ. ವೆಚ್ಚ ಮಾಡಲಾಗುವುದು. ಈ ಯೋಜನೆಯಿಂದ ಮೀನುಗಾರಿಕೆ ಕ್ಷೇತ್ರಕ್ಕೆ ಹೊಸ ಮೂಲಸೌಕರ್ಯ, ಆಧುನಿಕ ಸಲಕರಣೆ ಮತ್ತು ಹೊಸ ಮಾರುಕಟ್ಟೆಗಳು ಸಿಗಲಿವೆ.
ಈ ಯೋಜನೆ 21 ರಾಜ್ಯಗಳಲ್ಲಿ ವಿಸ್ತರಣೆಯಾಗಲಿದ್ದು, ಬಿಹಾರದಲ್ಲಿ ಗುರುವಾರ ಚಾಲನೆ ನೀಡಲಾಗಿದೆ ಎಂದು ಮೋದಿ ಹೇಳಿದರು.

ಇ-ಗೋಪಾಲ್‌ ಎಂದರೇನು?
ಮತ್ಸ್ಯ ಸಂಪದ ಯೋಜನೆ ಜತೆಯಲ್ಲೇ ಮೋದಿ ಅವರು ಇ-ಗೋಪಾಲ್‌ ಮೊಬೈಲ್‌ ಆ್ಯಪ್ಲಿಕೇಶನ್‌ಗೂ ಗುರುವಾರ ಚಾಲನೆ ನೀಡಿದರು. ಈ ಆ್ಯಪ್‌ ಮೂಲಕ ರೈತರು ಉತ್ತಮ ಗುಣಮಟ್ಟದ ಜಾನುವಾರುಗಳನ್ನು ಆಯ್ಕೆ ಮಾಡಬಹುದು. ಇದರಿಂದ ಮಧ್ಯವರ್ತಿಗಳ ಹಾವಳಿ ತಪ್ಪಿದಂತಾಗುತ್ತದೆ. ಜಾನುವಾರುಗಳ ಆರೈಕೆ, ಉತ್ಪಾದಕತೆ, ಆರೋಗ್ಯ, ಆಹಾರ ಕ್ರಮದ ಬಗ್ಗೆ ಈ ಆ್ಯಪ್‌ನಲ್ಲಿ ಮಾಹಿತಿ ಪಡೆಯಬಹುದು ಎಂದು ಮೋದಿ ಹೇಳಿದರು.

ದುಪ್ಪಟ್ಟು ರಫ್ತಿನ ಗುರಿ
ಮುಂದಿನ 3ರಿಂದ 4 ವರ್ಷಗಳಲ್ಲಿ ಮೀನುಗಾರಿಕೆ ಕ್ಷೇತ್ರದಲ್ಲಿ ಭಾರತ ಈಗ ರಫ್ತು ಮಾಡುತ್ತಿರುವುದನ್ನು ದ್ವಿಗುಣಗೊಳಿಸುವಂತಾಗಬೇಕು. ಇದೇ ಈ ಯೋಜನೆಯ ಗುರಿ ಎಂದು ಮೋದಿ ಹೇಳಿದ್ದಾರೆ. ಈ ಯೋಜನೆಯಿಂದಾಗಿ ಮೀನುಗಾರಿಕೆ ಕ್ಷೇತ್ರದಲ್ಲಿ ಲಕ್ಷಾಂತರ ಉದ್ಯೋಗಗಳು ಹುಟ್ಟಿಕೊಳ್ಳಲಿವೆ. ಸ್ವಾತಂತ್ರ್ಯಾ ನಂತರದಲ್ಲಿ ಇದೇ ಮೊದಲ ಬಾರಿಗೆ ಮೀನುಗಾರಿಕೆ ಕ್ಷೇತ್ರದಲ್ಲಿ ಇಂಥ ಒಂದು ಯೋಜನೆ ಆರಂಭಿಸಲಾಗುತ್ತಿದೆ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next