Advertisement
ಮುಂದಿನ ನಾಲ್ಕೈದು ವರ್ಷ ಗಳಲ್ಲಿ ಮತ್ಸ್ಯ ಸಂಪದ ಯೋಜನೆಗೆ 20 ಸಾವಿರ ಕೋ. ರೂ. ವೆಚ್ಚ ಮಾಡಲಾಗುವುದು. ಈ ಯೋಜನೆಯಿಂದ ಮೀನುಗಾರಿಕೆ ಕ್ಷೇತ್ರಕ್ಕೆ ಹೊಸ ಮೂಲಸೌಕರ್ಯ, ಆಧುನಿಕ ಸಲಕರಣೆ ಮತ್ತು ಹೊಸ ಮಾರುಕಟ್ಟೆಗಳು ಸಿಗಲಿವೆ.ಈ ಯೋಜನೆ 21 ರಾಜ್ಯಗಳಲ್ಲಿ ವಿಸ್ತರಣೆಯಾಗಲಿದ್ದು, ಬಿಹಾರದಲ್ಲಿ ಗುರುವಾರ ಚಾಲನೆ ನೀಡಲಾಗಿದೆ ಎಂದು ಮೋದಿ ಹೇಳಿದರು.
ಮತ್ಸ್ಯ ಸಂಪದ ಯೋಜನೆ ಜತೆಯಲ್ಲೇ ಮೋದಿ ಅವರು ಇ-ಗೋಪಾಲ್ ಮೊಬೈಲ್ ಆ್ಯಪ್ಲಿಕೇಶನ್ಗೂ ಗುರುವಾರ ಚಾಲನೆ ನೀಡಿದರು. ಈ ಆ್ಯಪ್ ಮೂಲಕ ರೈತರು ಉತ್ತಮ ಗುಣಮಟ್ಟದ ಜಾನುವಾರುಗಳನ್ನು ಆಯ್ಕೆ ಮಾಡಬಹುದು. ಇದರಿಂದ ಮಧ್ಯವರ್ತಿಗಳ ಹಾವಳಿ ತಪ್ಪಿದಂತಾಗುತ್ತದೆ. ಜಾನುವಾರುಗಳ ಆರೈಕೆ, ಉತ್ಪಾದಕತೆ, ಆರೋಗ್ಯ, ಆಹಾರ ಕ್ರಮದ ಬಗ್ಗೆ ಈ ಆ್ಯಪ್ನಲ್ಲಿ ಮಾಹಿತಿ ಪಡೆಯಬಹುದು ಎಂದು ಮೋದಿ ಹೇಳಿದರು. ದುಪ್ಪಟ್ಟು ರಫ್ತಿನ ಗುರಿ
ಮುಂದಿನ 3ರಿಂದ 4 ವರ್ಷಗಳಲ್ಲಿ ಮೀನುಗಾರಿಕೆ ಕ್ಷೇತ್ರದಲ್ಲಿ ಭಾರತ ಈಗ ರಫ್ತು ಮಾಡುತ್ತಿರುವುದನ್ನು ದ್ವಿಗುಣಗೊಳಿಸುವಂತಾಗಬೇಕು. ಇದೇ ಈ ಯೋಜನೆಯ ಗುರಿ ಎಂದು ಮೋದಿ ಹೇಳಿದ್ದಾರೆ. ಈ ಯೋಜನೆಯಿಂದಾಗಿ ಮೀನುಗಾರಿಕೆ ಕ್ಷೇತ್ರದಲ್ಲಿ ಲಕ್ಷಾಂತರ ಉದ್ಯೋಗಗಳು ಹುಟ್ಟಿಕೊಳ್ಳಲಿವೆ. ಸ್ವಾತಂತ್ರ್ಯಾ ನಂತರದಲ್ಲಿ ಇದೇ ಮೊದಲ ಬಾರಿಗೆ ಮೀನುಗಾರಿಕೆ ಕ್ಷೇತ್ರದಲ್ಲಿ ಇಂಥ ಒಂದು ಯೋಜನೆ ಆರಂಭಿಸಲಾಗುತ್ತಿದೆ ಎಂದು ಹೇಳಿದ್ದಾರೆ.