Advertisement

ಭಾರತ ನಾಶವಾಗದಂತೆ ತಡೆಯಲು ಇ-ಸಿಗರೇಟ್ ನಿಷೇಧ: ಮನ್ ಕೀ ಬಾತ್ ನಲ್ಲಿ ಪ್ರಧಾನಿ ಮೋದಿ

09:54 AM Sep 30, 2019 | Team Udayavani |

ನವದೆಹಲಿ: ಇ-ಸಿಗರೇಟ್ ಮಾನವನ ಆರೋಗ್ಯದ ಮೇಲೆ ಅತೀ ಹೆಚ್ಚು ದುಷ್ಪರಿಣಾಮ ಬೀರುವುದರಿಂದ ಅವುಗಳನ್ನು ನಿಷೇಧಿಸಲಾಗಿದೆ ಎಂದು ಪ್ರಧಾನಿ ಮೋದಿ ತಿಳಿಸದ್ದಾರೆ.

Advertisement

ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ದೇಶವನ್ನು ಉದ್ದೇಶಿಸಿ ಮಾತನಾಡಿದ   ಅವರು, ಇ- ಸಿಗರೇಟ್ ನಿರುಪದ್ರವ ಎಂದು ಇಂದಿನ ಯುವಜನಾಂಗ ಭಾವಿಸಿದೆ. ತಂಬಾಕು ಉತ್ಪನ್ನ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಅದರ ವ್ಯಸನಿಯಾದರೇ ಹೊರಬರುವುದು ಬಹಳ ಕಷ್ಟ. ತಂಬಾಕು ಸೇವನೆಯಿಂದ ಕ್ಯಾನ್ಸರ್, ಸಕ್ಕರೆ ಕಾಯಿಲೆ, ಅಧಿಕ ರಕ್ತದೊತ್ತಡ ಮುಂತಾದ ಹಲವಾರು ಕಾಯಿಲೆಗಳು ಬರುತ್ತವೆ. ತಂಬಾಕಿನಲ್ಲಿ ನಿಕೋಟಿನ್ ಅಂಶ ಹೆಚ್ಚಿರುವುದರಿಂದ ಯುವ ಜನಾಂಗದ ಮಾನಸಿಕ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ. ಜನರಲ್ಲಿ ಅರಿವಿನ ಕೊರತೆಯಿಂದ ಇ-ಸಿಗರೇಟ್ ಬಳಕೆ ಹೆಚ್ಚುತ್ತಿದೆ. ಅದನ್ನು ಕೂಡಲೇ ನಿಲ್ಲಿಸುವಂತೆ ಈ ಸಂದರ್ಭದಲ್ಲಿ ತಿಳಿಸಿದರು.

ಇತ್ತೀಚಿಗೆ ಕೇಂದ್ರ ಸರಕಾರ ಭಾರತದಲ್ಲಿ ಇ-ಸಿಗರೇಟ್ ಅನ್ನು ಸಂಪೂರ್ಣ ನಿಷೇಧ ಮಾಡಿತ್ತು. ಹೊಸ ಕಾನೂನಿನ ಪ್ರಕಾರ ಇ-ಸಿಗರೇಟಿನ ಖರೀದಿ, ಅಮದು, ಉತ್ಪಾದನೆ, ಸಂಗ್ರಹಣೆ ನಿಷೇಧವಾಗಿದೆ. ಇದನ್ನು ಉಲ್ಲಂಘಿಸಿದರೆ 3 ವರ್ಷ ಜೈಲು ಮತ್ತು 5 ಲಕ್ಷದವರೆಗೂ ದಂಡ ವಿಧಿಸಬಹುದಾಗಿದೆ.

ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡಿದ ಹೆಣ್ಣುಮಕ್ಕಳಿಗೆ ದೀಪಾವಳಿ ಸಂದರ್ಭದಲ್ಲಿ ವಿಶೇಷ ಬಹುಮಾನ ನೀಡಿ ಸನ್ಮಾನಿಸಲಾಗುವುದು. ಅದರ ಜೊತೆಗೆ ಹೆಚ್ಚು ಹೆಚ್ಚು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಿ. ಹೆಣ್ಣು ಮಕ್ಕಳ ಸಾಧನೆಗಳನ್ನು #Bharatkilakshmi ಎಂಬ ಹ್ಯಾಶ್ ಟ್ಯಾಗ್ ಬಳಸಿ ಸಾಮಾಜಿಕ ಜಾಲತಾಣದಲ್ಲಿ  ಪಸರಿಸಿ ಎಂದು  ದೇಶದ ಜನರಿಗೆ ಈ ಸಂದರ್ಭದಲ್ಲಿ ಕರೆ ನೀಡಿದರು.

ಯುಎಸ್ ಓಪನ್ ನಲ್ಲಿ ರಫೆಲ್ ನಡಾಲ್ ವಿರುದ್ಧ ಸೋತ ಡೆನಿಲ್ ಮೆಡ್ವಡೇವ್ ಅವರ ಭಾಷಣವನ್ನು ಉಲ್ಲೇಖಿಸಿ ಮಾತನಾಡಿದ ಪ್ರಧಾನಿ ಮೋದಿ ಅವರ ಕ್ರೀಡಾ ಮನೋಭಾವನೆಗೆ ಮೆಚ್ಚುಗೆ ಸೂಚಿಸಿದರು

Advertisement

ಇದಕ್ಕೂ ಮೊದಲು ಹಿರಿಯ ಗಾಯಕಿ ಲತಾ ಮಂಗೇಶ್ಕರ್ ಅವರಿಗೆ ಜನ್ಮ ದಿನದ ಶುಭಾಶಯ ಹೇಳುವ ಮೂಲಕ  ಪ್ರಧಾನಿ ಮೋದಿ ಮನ್ ಕೀ ಬಾತ್ ಕಾರ್ಯಕ್ರಮವನ್ನು ಆರಂಭಿಸಿದರು. ಲತಾ ಮಂಗೇಶ್ಕರ್ ನಮಗೆ ಸ್ಪೂರ್ತಿಯಾಗಿದ್ದಾರೆ. ಅವರಿಗೆ ಹೆಚ್ಚಿನ ಗೌರವವನ್ನು ಸೂಚಿಸುತ್ತೇನೆ. ಹಾಗಾಗಿ ಅವರನ್ನು ‘ದೀದಿ’ ಎಂದು ಕರೆಯಲಾಗುತ್ತಿದೆ ಎಂದು ತಿಳಿಸಿದರು.

ಇದು ಹಬ್ಬದ ಸಮಯ. ಹೆಚ್ಚು ಹೆಚ್ಚು ಉಡುಗೊರೆಗಳು ಮನೆಬಾಗಿಲಿಗೆ ಬರುತ್ತವೆ. ನಮಗೆ ಬೇಕಾದಷ್ಟು ಇರಿಸಿಕೊಂಡು ಉಳಿದವುಗಳನ್ನು ಇತರರಿಗೆ ದಾನ ಮಾಡುವ ಮೂಲಕ ಹಬ್ಬದ ಮಹತ್ವವನ್ನು ಹೆಚ್ಚಿಸಿಕೊಳ್ಳಿ ಎಂದು ಸಲಹೆ  ನಿಡಿದರು.

Advertisement

Udayavani is now on Telegram. Click here to join our channel and stay updated with the latest news.

Next