Advertisement

ರಿಕ್ಷಾ ಚಾಲಕನಿಗೆ ಪತ್ರ ಬರೆದ ಪ್ರಧಾನಿ ಮೋದಿ

09:47 AM Feb 17, 2020 | sudhir |

ವಾರಾಣಸಿ: ಪ್ರಧಾನಿ ನರೇಂದ್ರ ಮೋದಿಯವರು ದತ್ತು ಪಡೆದಿರುವ ವಾರಾಣಸಿ ಜಿಲ್ಲೆಯ ಡೋಮ್ರಿ ಹಳ್ಳಿಯಲ್ಲಿ ಇತ್ತೀಚೆಗೆ ಮದುವೆ ಯಾದ ನವಜೋಡಿಗೆ ಪ್ರಧಾನಿ ನರೇಂದ್ರ ಮೋದಿ ಶುಭಾಷಯ ಪತ್ರ ಕಳುಹಿಸಿದ್ದಾರೆ.

Advertisement

ವೃತ್ತಿಯಲ್ಲಿ ಸೈಕಲ್‌ ರಿಕ್ಷಾ ತುಳಿಯುವ ಮಂಗಳ್‌ ಕೇವಟ್‌ ಎಂಬವರು ತಮ್ಮ ಪುತ್ರಿಯ ವಿವಾಹವನ್ನು ಇತ್ತೀಚೆಗೆ ನೆರವೇರಿ ಸಿದ್ದಾರೆ. ಮದುವೆಗೂ ಮುನ್ನ ವಿವಾಹದ ಆಮಂತ್ರಣ ಪತ್ರಿಕೆಯನ್ನು ಅವರು ಮೋದಿ ಯವರಿಗೆ ಕಳುಹಿಸಿ, ಮದುವೆಗೆ ಆಗಮಿಸಿ ನವ ವಧು-ವರರಿಗೆ ಆಶೀರ್ವದಿಸುವಂತೆ ಕೋರಿದ್ದರು.

ಆದರೆ, ಮೋದಿಯವರಿಗೆ ಮದುವೆಗೆ ಬರಲಾಗಲಿಲ್ಲ. ಆದರೆ, ಅದಕ್ಕೆ ಬದಲು ಶುಭಾಷಯ ಪತ್ರ ಕಳುಹಿಸಿದ್ದು, ಅದು ಶನಿವಾರ ಮಂಗಳ್‌ರವರ ಕುಟುಂಬ ತಲುಪಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಮಂಗಳ್‌, “ನನ್ನ ಕೆಲವು ಸ್ನೇಹಿತರ ಸಲಹೆಯ ಮೇರೆಗೆ ಪ್ರಧಾನಿ ಯವರಿಗೆ ಆಮಂತ್ರಣ ಕಳುಹಿಸಿದ್ದೆ. ಈಗ ಅದಕ್ಕೆ ಪ್ರತಿಯಾಗಿ ಅವರು ಶುಭಾಷಯ ಕಳುಹಿಸಿದ್ದಾರೆ. ತುಂಬಾ ಖುಷಿಯಾಗಿದೆ. ಇದನ್ನು ನಾನು ನಿರೀಕ್ಷಿಸಿರಲಿಲ್ಲ” ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next