Advertisement

Bidar; ಪ್ರಧಾನಿ ಮೋದಿಗೆ ನಾಚಿಕೆಯಾಗಬೇಕು: ಸಚಿವ ಎಚ್.ಕೆ ಪಾಟೀಲ

05:17 PM Nov 06, 2023 | Team Udayavani |

ಬೀದರ್: ರಾಜ್ಯದ ಕಾಂಗ್ರೆಸ್ ಸರ್ಕಾರ ಲೂಟಿಗೆ ಇಳಿದಿದೆ ಎಂದು ಹೇಳಿಕೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಾಚಿಕೆಯಾಗಬೇಕು ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ ಪಾಟೀಲ್ ಕಿಡಿಕಾರಿದ್ದಾರೆ.

Advertisement

ನಗರದಲ್ಲಿ ಸೋಮವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಎಲೆಕ್ಟ್ರಿಕಲ್ ಬಾಂಡ್ ಅನ್ನು ಆರ್‌ಟಿ‌ಐ ಮಾಹಿತಿ ಹಕ್ಕಿನಲ್ಲೂ ಕೊಡದಂತೆ ಕಾನೂನು ಜಾರಿ ಮಾಡಿದ್ದೀರಿ, ನೀವು ಯಾರ ಬಗ್ಗೆ ಮಾತನಾಡುತ್ತೀದ್ದೀರಿ ಎಂದು ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಸಿಎಂ ಮತ್ತು ಡಿಸಿಎಂ ಕುರ್ಚಿ ಕಿತ್ತಾಟದ ಸಂದಾನಕ್ಕೆ ಬಂದವರು ಸೂಟ್‌ಕೇಸ್ ತೆಗೆದುಕೊಂಡು ಹೋಗತ್ತಾರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಅವರು ನೀಡಿರುವ ಹೇಳಿಕೆಗೆ ತಿರುಗೇಟು ನೀಡಿದ ಸಚಿವ ಪಾಟೀಲ, ಹೆಚ್‌ಡಿಕೆಗೆ ಬರೀ ಸೂಟ್‌ಕೇಸ್‌ ‌ನದ್ದೆ ಚಿಂತೇನಾ? ಜನರ ಸಮಸ್ಯೆ ಬಗ್ಗೆ ಮಾತನಾಡುವುದನ್ನು ಬಿಟ್ಟು ಸೂಟ್‌ಕೇಸ್ ಬಗ್ಗೆ ಮಾತನಾಡುವುದು ದುರ್ದೈವದ ಸಂಗತಿ. ಬಿಜೆಪಿ ಸೇರಿಕೊಂಡಿರುವ ಹೊಸ ಪಾರ್ಟ್ನರ್‌ ಗಳ ದೃಷ್ಟಿ ಬರಿ ಸೂಟ್‌ಕೇಸ್ ಮೇಲೆ ಇದೆ ಎಂದು ಲೇವಡಿ ಮಾಡಿದರು.

ಕಾಂಗ್ರೆಸ್‌ ನಲ್ಲಿ ದಲಿತ ಸಿಎಂ ಕೂಗು ವಿಚಾರಕ್ಕೆ ಪ್ರತಿಕ್ರಯಿಸಿದ ಸಚಿವರು, ಸಿಎಂ ಹುದ್ದೆ ಸದ್ಯ ಖಾಲಿ‌ ಇಲ್ಲ, ಖಾಲಿ ಆದಾಗ ಮಾತಾಡೋಣ ಎಂದು ಹೇಳಿದರು.

ಇದನ್ನೂ ಓದಿ:JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?

Advertisement

ರಾಜ್ಯದಲ್ಲಿ ತೀವ್ರ ಬರ ಹಿನ್ನಲೆ, 200ಕ್ಕೂ ಹೆಚ್ಚು ತಾಲೂಕುಗಳನ್ನ ಬರ ಘೋಷಣೆ ಮಾಡಲಾಗಿದೆ. ಒಬ್ಬ ಕೇಂದ್ರ ಮಂತ್ರಿನೂ ರಾಜ್ಯಕ್ಕೆ ಭೇಟಿ‌ ಕೊಡಲಿಲ್ಲ. ಬರ ಘೋಷಣೆ ಮಾಡಿ, ನಮ್ಮ ಮುಖ್ಯಮಂತ್ರಿಗಳು, ಪ್ರಧಾನಿ ಅವರನ್ನು ಭೇಟಿ ಮಾಡುತ್ತೇವೆಂದರೆ ಸಿಗಲಿಲ್ಲ. ಆದರೆ, ಬಿಜೆಪಿಯವರು ಬರ ಅಧ್ಯಯನ ಪ್ರವಾಸ ಮಾಡುತ್ತಿದ್ದು, ಅವರಿಗೆ ಏನು ಹೇಳಬೇಕು ಎಂದು ವ್ಯಂಗ್ಯವಾಡಿದ ಸಚಿವರು, ಕನ್ನಡ ನಾಡಿನ‌ ಬಗ್ಗೆ ಕೇಂದ್ರದವರು ಮಲತಾಯಿ‌ ಧೋರಣೆ‌ ಮಾಡುತ್ತಿದ್ದಾರೆ. ಹೆಲಿಕಾಪ್ಟರ್, ವಿಮಾನದ ಮೂಲಕವಾದರೂ ಬಂದು ಪರಿಶೀಲನೆ‌ ಮಾಡಲಿ ಎಂದು ಒತ್ತಾಯಿಸಿದರು.

ರಾಜ್ಯದಲ್ಲಿ ಕೆಲವೆಡೆ ಹಸಿರು ಬರ ಮತ್ತು ಕೆಲವೆಡೆ ಒಣ ಬರ ಇದೆ. ಒಂದು ಹಂಗಾಮು ಹಾನಿಯಾದರೂ ಒಂದು ಬಿಡುಗಾಸು ಕೇಂದ್ರದಿಂದ ಪರಿಹಾರ ಕೊಟ್ಟಿಲ್ಲ. ಇಲ್ಲಿನ ವಸ್ತು ಸ್ಥಿತಿ ಅರಿತು ಕೂಡಲೇ ಅನುದಾನ ನೀಡಬೇಕು ಎಂದು ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next