Advertisement

ಮೋದಿ ಅವರನ್ನು ಆಯ್ಕೆ ಮಾಡಿದವರು ಅನಕ್ಷರಸ್ಥರಲ್ಲ: ಬಿಜೆಪಿ ತಿರುಗೇಟು

11:27 AM Sep 13, 2018 | Team Udayavani |

ಮುಂಬೈ:ಪ್ರಧಾನಿ ನರೇಂದ್ರ ಮೋದಿ ಅನಾಗರಿಕ ಮತ್ತು ಅನಕ್ಷರಸ್ಥ ಎಂದು ಕಾಂಗ್ರೆಸ್ ಮುಖಂಡ ಸಂಜಯ್ ನಿರುಪಮ್ ನೀಡಿದ ಹೇಳಿಕೆಗೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಪ್ರಧಾನಿ ಮೋದಿ ಅವರ ಬಗ್ಗೆ ಕೀಳು ಮಟ್ಟದ ಹೇಳಿಕೆ ನೀಡಿರುವ ನಿರುಪಮ್ ಗೆ ತಲೆಕೆಟ್ಟಿದೆ ಎಂದು ಬಿಜೆಪಿ ತಿರುಗೇಟು ನೀಡಿದೆ.

Advertisement

ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಈಗ ಮತ್ತೊಬ್ಬ ಮಾನಸಿಕ ಅಸ್ವಸ್ಥ ಸಂಜಯ್ ನಿರುಪಮ್ ಅವರಿಂದ ಹೇಳಿಕೆ ಹೊರಬಿದಿದ್ದಿದೆ ಎಂದು ಮಹಾರಾಷ್ಟ್ರ ಬಿಜೆಪಿ ಘಟಕದ ವಕ್ತಾರಶೈನಾ ಎನ್ ಸಿ ಟ್ವೀಟ್ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಹುಶಃ ನಿರುಪಮ್ ಗೆ ಮರೆತು ಹೋಗಿದೆಯೇನೋ..ಪ್ರಧಾನಿ ನರೇಂದ್ರ ಮೋದಿ ಅವರು ದೇಶದ 125 ಕೋಟಿ ಜನರಿಂದ ಆಯ್ಕೆಗೊಂಡಿದ್ದಾರೆ. ಅವರೆಲ್ಲ ಅನಕ್ಷರಸ್ಥರಾಗಲಿ, ಅನಾಗರಿಕರಾಗಲಿ ಅಲ್ಲ ಎಂದು ತಿರುಗೇಟು ನೀಡಿದ್ದಾರೆ. ನಿಜವಾಗಿಯೂ ನಿಮಗೆ 2019ರ ಲೋಕಸಭಾ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತಾರೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next