Advertisement

ಪ್ರತಿಬಾರಿ ಮೋದಿ ದೂರುವುದಕ್ಕೆ ಅರ್ಥವಿಲ್ಲ: ಜೈರಾಂ ರಮೇಶ್‌

10:41 AM Aug 23, 2019 | Sriram |

ಹೊಸದಿಲ್ಲಿ: ಪ್ರತಿಬಾರಿಯೂ ಪ್ರಧಾನಿ ನರೇಂದ್ರ ಮೋದಿಯವರನ್ನು ದೂರುವುದಕ್ಕೆ ಅರ್ಥವೇ ಇಲ್ಲ ಎಂದು ಯುಪಿಎ ಅವಧಿಯಲ್ಲಿ ಕೇಂದ್ರ ಸಚಿವರಾಗಿದ್ದ, ಕಾಂಗ್ರೆಸ್‌ನ ಹಿರಿಯ ಮುಖಂಡ ಜೈರಾಂ ರಮೇಶ್‌ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

Advertisement

ಮೋದಿ ಅವರ ಅಭಿವೃದ್ಧಿ ಮಾದರಿ ಸಂಪೂರ್ಣ ಋಣಾತ್ಮಕವಾದ್ದೇನೂ ಅಲ್ಲ. ಅವರ ಕೆಲಸಗಳನ್ನು ಪರಿಗಣಿಸದೆ ಯಾವತ್ತೂ ದೂರುತ್ತಲೇ ಇರುವುದು ಪ್ರತಿಪಕ್ಷಗಳಿಗೆ ನೆರವು ನೀಡದು ಎಂದು ಹೇಳಿದ್ದಾರೆ.

ಪುಸ್ತಕ ಬಿಡುಗಡೆ ಕಾರ್ಯಕ್ರಮವೊಂದರಲ್ಲಿ ಅವರು ಮಾತನಾಡುತ್ತ ಹೀಗೆ ಹೇಳಿದ್ದಾರೆ. 2014ರಿಂದ 2019ರ ಅವಧಿಯಲ್ಲಿ ಮಾಡಿದ ಕೆಲವು ಕೆಲಸಗಳಿಂದಲೇ ಅವರು ಮತ್ತೆ ಅಧಿಕಾರಕ್ಕೆ ಬಂದರು. ಜತೆಗೆ ಆ ಪಕ್ಷದ ಶೇಕಡಾವಾರು ಮತಗಳಿಕೆ 37ರಷ್ಟಾಗಿತ್ತು.

ಪ್ರಧಾನಿ ಮೋದಿ ಜನರಿಗೆ ಅರ್ಥವಾಗುವ ರೀತಿಯಲ್ಲಿ ಮಾತನಾಡುತ್ತಾರೆ. ಅವರು ಮಾಡಿದ್ದನ್ನು ಜನರೂ ಅರ್ಥಮಾಡಿಕೊಳ್ಳುತ್ತಿದ್ದಾರೆ ಎಂಬುದನ್ನು ನಾವು ಗಮನಿಸಬೇಕು. ಇದನ್ನು ಅರ್ಥಮಾಡಿಕೊಂಡು ಅವರನ್ನು ಎದುರಿಸಬೇಕು. ಜತೆಗೆ ಪ್ರತಿ ಬಾರಿಯೂ ಅವರನ್ನು ಟೀಕಿಸುತ್ತಲೇ ಇರುವುದರಿಂದಲೂ ಅವರನ್ನು ಎದುರಿಸುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next