Advertisement

ನೆರೆ ಪರಿಹಾರ ಅಂಕಿ ಹೇಳಲೂ ಪ್ರಧಾನಿಗೆ ಶಕ್ತಿ ಇಲ್ಲ: ಎಚ್‌ಕೆ

11:03 PM Jan 12, 2020 | Lakshmi GovindaRaj |

ಗದಗ: ರಾಜ್ಯದಲ್ಲಿ ಉಂಟಾದ ನೆರೆ ಪರಿಹಾರಕ್ಕೆ ಕೇಂದ್ರದ ನೆರವು ಆನೆ ಹೊಟ್ಟಿಗೆ ಅರೆಕಾಸಿನ ಮಜ್ಜಿಗೆ ಎನ್ನುವಂತಾಗಿದೆ. ಹೀಗಾಗಿ ರಾಜ್ಯ ಬಿಡುಗಡೆ ಮಾಡಿರುವ ಅನುದಾನದ ಅಂಕಿ-ಅಂಶ ಹೇಳುವಷ್ಟು ಶಕ್ತಿ ಪ್ರಧಾನಿ ಮೋದಿಗೆ ಇಲ್ಲ ಎಂದು ಕಾಂಗ್ರೆಸ್‌ ನಾಯಕ ಎಚ್‌.ಕೆ.ಪಾಟೀಲ ಆರೋಪಿಸಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿ, ಕೇಂದ್ರ ನೀಡಿದ್ದ ನೆರೆ ನೆರವು ಯಾವುದಕ್ಕೂ ಸಾಲುತ್ತಿಲ್ಲ. ಹೀಗಾಗಿ ಇತ್ತೀಚೆಗೆ ರಾಜ್ಯಕ್ಕೆ ಭೇಟಿ ನೀಡಿದ್ದ ಮೋದಿ ಅವರಿಗೆ ನೆರೆ ಪರಿಹಾರಕ್ಕಾಗಿ ಹೆಚ್ಚಿನ ಅನುದಾನ ನೀಡುವಂತೆ ಸಿಎಂ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಯಾವುದೇ ಭರವಸೆ ನೀಡದೆ ರಾಜ್ಯದ ಜನತೆಯನ್ನು ಪ್ರಧಾನಿ ಅವಮಾನಿಸಿದ್ದಾರೆ.

ಆಪರೇಷನ್‌ ಕಮಲದಿಂದ ಉಪ ಚುನಾವಣೆಯಲ್ಲಿ ಗೆದ್ದ ಎಲ್ಲ ಶಾಸಕರಿಗೂ ಸಚಿವ ಸ್ಥಾನ ನೀಡುವುದಾಗಿ ಹೇಳಿಕೆ ನೀಡಿದರೆ, ಬಿಜೆಪಿ ಇತರೆ ಸಚಿವರಾದ ಸಿ.ಟಿ.ರವಿ, ಈಶ್ವರಪ್ಪ ಒಂದೊಂದು ಹೇಳಿಕೆ ನೀಡುತ್ತಿದ್ದಾರೆ. ಕಾಂಗ್ರೆಸ್‌ ಸರ್ಕಾರದಲ್ಲಿ ದಲಿತರು ಸಿಎಂ ಆಗುವುದಿಲ್ಲ ಎನ್ನುವ ಶಾಸಕ ರಾಜುಗೌಡ, ಸ್ಥಿರ ಸರ್ಕಾರವನ್ನು ಪತನಗೊಳಿಸಿದ್ದಾರೆ. ರಾಜುಗೌಡ ಮಂತ್ರಿಯಾಗಿ ತೋರಿಸಲಿ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next