Advertisement

ಮತ್ತೆ ಹುಟ್ಟಿ ಬನ್ನಿ; ಹುತಾತ್ಮ ಧೀರ ಯೋಧರಿಗೆ ಪ್ರಧಾನಿ ಗೌರವ ನಮನ

06:50 PM Feb 15, 2017 | Sharanya Alva |

ನವದೆಹಲಿ:ಉತ್ತರ ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ನಿನ್ನೆ ಉಗ್ರರು ನಡೆಸಿದ 2 ಪ್ರತ್ಯೇಕ ಗುಂಡಿನ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಬುಧವಾರ ಪ್ರಧಾನಿ ನರೇಂದ್ರ ಮೋದಿ ಹಾಗೂ ಆರ್ಮಿ ಮುಖ್ಯಸ್ಥ ಬಿಪಿನ್ ರಾವತ್ ಅವರು ಅಂತಿಮ ಗೌರವ ಸಲ್ಲಿಸಿದರು.

Advertisement

ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ಜತೆಗೆ ನಡೆದ ಎರಡು ಪ್ರತ್ಯೇಕ ಗುಂಡಿನ ಕಾಳಗದಲ್ಲಿ  ಓರ್ವ ಮೇಜರ್ ಸೇರಿ ನಾಲ್ವರು ಸೈನಿಕರು ಹುತಾತ್ಮರಾಗಿದ್ದರು. ಪ್ರತಿದಾಳಿ ನಡೆಸಿದ್ದ ಸೈನಿಕರು ನಾಲ್ವರು ಉಗ್ರರನ್ನು ಹೊಡೆದುರುಳಿಸಿದ್ದರು. 

ನವದೆಹಲಿಯ ಪಾಲಂ ವಿಮಾನ ನಿಲ್ದಾಣಕ್ಕೆ ಹುತಾತ್ಮ ಯೋಧರ ಕಳೆಬರ ಆಗಮಿಸಿದ್ದ ವೇಳೆಯಲ್ಲಿ ಪ್ರಧಾನಿ ಅವರು ಯೋಧರಿಗೆ ಅಂತಿಮ ಗೌರವ ಸಲ್ಲಿಸಿದರು. 

ಎನ್ ಕೌಂಟರ್ ಸಂದರ್ಭದಲ್ಲಿ ಸ್ಥಳೀಯರು ನೀಡಿದ ಸಹಕಾರಕ್ಕೆ ಮಿಲಿಟರಿ ಮುಖ್ಯಸ್ಥರಾದ ರಾವತ್ ಅವರು ಅಭಿನಂದನೆ ಸಲ್ಲಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next