Advertisement

ಪೋಯೆಸ್‌ ಗಾರ್ಡನ್‌ನಲ್ಲಿ ಐಟಿ ದಾಳಿ: ದಿನಕರನ್‌ಕಿಡಿ

06:40 AM Nov 19, 2017 | Team Udayavani |

ಚೆನ್ನೈ: ತಮಿಳುನಾಡಿನ ಪೋಯೆಸ್‌ ಗಾರ್ಡನ್‌ನಲ್ಲಿ ಶುಕ್ರವಾರ ರಾತೋರಾತ್ರಿ ನಡೆದ ಆದಾಯ ತೆರಿಗೆ ಇಲಾಖೆ ದಾಳಿಗೆ ಎಐಎಡಿಎಂಕೆ ನಾಯಕ ಟಿಟಿವಿ ದಿನಕರನ್‌ ಗರಂ ಆಗಿದ್ದಾರೆ. ದಾಳಿ ಸಂಬಂಧ ಪ್ರಧಾನಿ ಮೋದಿ ಹಾಗೂ ವಿತ್ತ ಸಚಿವ ಅರುಣ್‌ ಜೇಟಿÉ ವಿರುದ್ಧ ಹರಿಹಾಯ್ದಿರುವ ದಿನಕರನ್‌, “ಮೋದಿ ಹಾಗೂ ಜೇಟಿÉ ನಮ್ಮ ಕುಟುಂಬವನ್ನು ನಾಶ ಮಾಡಲು ಹಾಗೂ ನಮ್ಮನ್ನು ರಾಜಕೀಯದಿಂದ ಕಿತ್ತೂಗೆ ಯಲು ನಡೆಸಿರುವ ಸಂಚು ಇದು’ ಎಂದು ಆರೋಪಿ ಸಿದ್ದಾರೆ. ಆದರೆ, ಸಿಎಂ ಪಳನಿಸ್ವಾಮಿ ಬಣವು, ಐಟಿ ದಾಳಿಗೆ ಶಶಿಕಲಾ ಕುಟುಂಬವೇ ಕಾರಣ ಎಂದಿದೆ.

Advertisement

ಶುಕ್ರವಾರ ರಾತ್ರಿ ಐಟಿ ಅಧಿಕಾರಿಗಳು ಮಾಜಿ ಸಿಎಂ ಜಯಲಲಿತಾ ಅವರ ಪೋಯೆಸ್‌ ಗಾರ್ಡನ್‌ನಲ್ಲಿರುವ ವೇದ ನಿಲಯಂ, ಶಶಿಕಲಾ ನಿವಾಸ, ಆಫೀಸ್‌ ಬ್ಲಾಕ್‌, ದಾಖಲೆಗಳಿಟ್ಟ ಕೋಣೆಗಳಲ್ಲಿ ಶೋಧ ಕಾರ್ಯ ನಡೆಸಿತ್ತು. ಈ ಕುರಿತು ಮಾತನಾಡಿದ ದಿನಕರನ್‌, “ಪೋಯೆಸ್‌ ಗಾರ್ಡನ್‌ ಎನ್ನುವುದು 1.5 ಕೋಟಿ ಕಾರ್ಯಕರ್ತರಿಗೆ ಪುಣ್ಯಸ್ಥಳವಿದ್ದಂತೆ. ಅಲ್ಲಿ ದಾಳಿ ನಡೆಸಿರುವುದು ಕಾರ್ಯಕರ್ತರ ಮನಸ್ಸಿಗೆ ನೋವಾಗಿದೆ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next