Advertisement

ಸ್ಮಶಾನ ಸ್ಥಳಾಂತರಕ್ಕೆ ಆಗ್ರಹಿಸಿ ಮನವಿ

07:05 AM May 28, 2020 | mahesh |

ಗೋಕಾಕ: ನಗರದ ಅಂಬೇಡ್ಕರ್‌ ಕಾಲೋನಿ ಪಕ್ಕದಲ್ಲಿರುವ ಕ್ರೈಸ್ತ ಹಾಗೂ ಚಲುವಾದಿ ಸಮುದಾಯಗಳ ಸ್ಮಶಾನವನ್ನು ಸ್ಥಳಾಂತರಿಸಲು ಆಗ್ರಹಿಸಿ ಇಲ್ಲಿಯ ಡಾ| ಬಿ.ಆರ್‌. ಅಂಬೇಡ್ಕರ್‌ ಹಿಂದುಳಿದ ವರ್ಗಗಳ ಕ್ಷೇಮಾಭಿವೃದ್ಧಿ ಸಂಘದವರು ಸಚಿವ ರಮೇಶ ಜಾರಕಿಹೊಳಿ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.

Advertisement

ಅಂಬೇಡ್ಕರ್‌ ಕಾಲೋನಿ ನಿವಾಸಿಗಳು 20 ವರ್ಷಗಳಿಂದ ಈ ಸ್ಥಳದಲ್ಲಿ ವಾಸವಾಗಿದ್ದಾರೆ. ಇತ್ತೀಚೆಗೆ ಕಾಲೋನಿಯ ಪಕ್ಕದಲ್ಲಿ ಕ್ರೈಸ್ತ ಹಾಗೂ ಚಲುವಾದಿ ಸಮುದಾಯದವರು ಸ್ಮಶಾನ ಭೂಮಿಗೆ ಕಾಂಪೌಂಡ್‌ ನಿರ್ಮಿಸುತ್ತಿದ್ದಾರೆ. ಈ ಪ್ರದೇಶವು ಸ್ಮಶಾನಕ್ಕೆ ಯೋಗ್ಯವಲ್ಲ. ಮನೆಗಳ ಹತ್ತಿರ
ಶವಗಳನ್ನು ಸುಡುವುದರಿಂದ ಇಲ್ಲಿಯ ಮಕ್ಕಳು ಹಾಗೂ ಜನರಲ್ಲಿ ಮಾನಸಿಕ ಪರಿಣಾಮ ಬಿರುತ್ತದೆ. ತಾವುಗಳು ಈ ಸ್ಮಶಾನವನ್ನು ಸ್ಥಳಾಂತರಿಸುವಂತೆ
ಅಧಿಕಾರಿಗಳಿಗೆ ಆದೇಶಿಸಬೇಕೆಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.

ಈ ಸಂದರ್ಭದಲ್ಲಿ ರಾಜೇಶ ಹಿರೇಅಂಬಿಗೇರ, ಲಕ್ಷ್ಮಣ ಮುಡ್ಡೆಪ್ಪಗೋಳ, ಚಿನ್ನಪ್ಪ ಮಲ್ಲಾಡದವರ, ಶಂಕರ ಶಿರಸಂಗಿ, ನಾಗಪ್ಪ ಅಂಬಿ, ಕುಶಾಲ ಭಾಗನ್ನವರ, ಲಕ್ಷ್ಮಣ ಮಲ್ಲಾಡದವರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next