Advertisement

ಕೆಸಿಸಿ ಟಿ10 ಲೀಗ್‌ಗೆ ಆಟಗಾರರ ಆಯ್ಕೆ

11:27 AM Mar 17, 2018 | Team Udayavani |

ಬೆಂಗಳೂರು: ಸುದೀಪ್‌ ನೇತೃತ್ವದಲ್ಲಿ ಶುರುವಾಗಿರುವ “ಕೆಸಿಸಿ ಟಿ-10′ (ಕರ್ನಾಟಕ ಚಲನಚಿತ್ರ ಕ್ರಿಕೆಟ್‌ ಕಪ್‌) ಕ್ರಿಕೆಟ್‌ ಲೀಗ್‌ಗೆ ಶುಕ್ರವಾರ ಆರು ತಂಡಗಳಿಗೆ ಆಟಗಾರರ ಆಯ್ಕೆ ಮಾಡಲಾಯಿತು. ಅರಮನೆ ಮೈದಾನದಲ್ಲಿ ಲಕ್ಕಿ ಡ್ರಾ ಮೂಲಕ ಆಟಗಾರರನ್ನು ಆಯ್ಕೆ ಮಾಡಿದ್ದು ವಿಶೇಷ. 

Advertisement

ಆರು ತಂಡಗಳಿಗೂ ಕೆಪಿಎಲ್‌ ಮತ್ತು ಸಿಸಿಎಲ್‌ ಆಟಗಾರರನ್ನೂ ಲಕ್ಕಿ ಡ್ರಾ ಮೂಲಕ ಆಯ್ಕೆ ಮಾಡಲಾಗಿದೆ. ಗೌತಮ್‌, ನಿಹಾಲ್‌ ಉಲ್ಲಾಳ್‌, ರೋಹಿತ್‌ ಗೌಡ, ಸ್ಟಾಲಿನ್‌, ಶರತ್‌, ರಕ್ಷಿತ್‌, ಕೆ.ಸಿ.ಕರಿಯಪ್ಪ, ರಿತೇಶ್‌ ಭಟ್ಕಳ್‌, ಶಬನ್‌ ಹೆಗ್ಡೆ, ಕಿಶೋರ್‌ ಕಾಮತ್‌, ರಜತ್‌ ಹೆಗಡೆ ಮತ್ತು ಪ್ರಶಾಂತ್‌ ಇವರು “ಕೆಸಿಸಿ ಟಿ-10′ ಲೀಗ್‌ ಪಂದ್ಯಗಳಿಗೆ ಆಯ್ಕೆಯಾಗಿದ್ದಾರೆ.

ಇವರೊಂದಿಗೆ ಆರು ತಂಡದಲ್ಲೂ ಒಬ್ಬೊಬ್ಬ ಸ್ಟಾರ್‌ ನಟರು ಆಡುತ್ತಿರುವುದು ವಿಶೇಷ. ಈ ಆರು ತಂಡಗಳಲ್ಲಿ ಪುನೀತ್‌ರಾಜ್‌ಕುಮಾರ್‌, ಶಿವರಾಜಕುಮಾರ್‌, ಸುದೀಪ್‌, ರಕ್ಷಿತ್‌ಶೆಟ್ಟಿ, ಯಶ್‌, ದಿಗಂತ್‌ ಅವರುಗಳು ಆಯ್ಕೆಯಾಗಿದ್ದಾರೆ. ಈ ಸ್ಟಾರ್‌ ನಟರನ್ನು ಸಹ ಲಕ್ಕಿ ಡ್ರಾ ಮೂಲಕ ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಅನಿಲ್‌ಕುಂಬ್ಳೆ ಅವರು ಆಯ್ಕೆ ಮಾಡಿ, ಶುಭಹಾರೈಸಿದರು.

ಈ ಕ್ರಿಕೆಟ್‌ಲೀಗ್‌ನ ಆರು ತಂಡಗಳಿಗೆ ಇಂದ್ರಜಿತ್‌ ಲಂಕೇಶ್‌, ಜಾಕ್‌ಮಂಜು, ನಂದಕಿಶೋರ್‌, ಸದಾಶಿವ ಶೆಣೈ, ಕೆ.ಪಿ.ಶ್ರೀಕಾಂತ್‌, ಕೃಷ್ಣ  ನಾಯಕರಾಗಿದ್ದು, ಈ ತಂಡದಲ್ಲಿ ಚಿತ್ರರಂಗದ ಎಲ್ಲಾ ವಿಭಾಗದಲ್ಲೂ ಕೆಲಸ ಮಾಡುತ್ತಿರುವ ಅದರಲ್ಲೂ ಕ್ರಿಕೆಟ್‌ನಲ್ಲಿ ಆಸಕ್ತಿ ಇರುವವರು ಆಟವಾಡಲಿದ್ದಾರೆ. ಈ ಕ್ರಿಕೆಟ್‌ ಲೀಗ್‌ಗೆ ನಡೆದ ಆಯ್ಕೆ ವೇಳೆ ಕನ್ನಡ ಚಿತ್ರರಂಗದ ನಿರ್ದೇಶಕ, ನಿರ್ಮಾಪಕ ಹಾಗು ಕಲಾವಿದರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು ವಿಶೇಷ. ಇದೇ ವೇಳೆ ತಂಡಗಳ ಜೆರ್ಸಿ ಕೂಡ ಬಿಡುಗಡೆ ಮಾಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next