Advertisement

ಮುಂದಿನ ಪಂದ್ಯಕ್ಕೆ ಕುಲದೀಪ್ ಮತ್ತು ಚಾಹಲ್ ಇಬ್ಬರನ್ನೂ ಆಡಿಸಿ: ಹರ್ಭಜನ್ ಸಲಹೆ

10:00 AM Feb 08, 2020 | keerthan |

ಆಕ್ಲಂಡ್: ಕಿವೀಸ್ ವಿರುದ್ಧದ ಮೊದಲ ಏಕದಿನ ಪಂದ್ಯವನ್ನು ಸೋತಿರುವ ಭಾರತ ಎರಡನೇ ಪಂದ್ಯದಲ್ಲಿ ತಿರುಗಿ ಬೀಳಲು ಸಜ್ಜಾಗಿದೆ. ಆದರೆ ಈ ಪಂದ್ಯಕ್ಕೂ ಮುನ್ನ ನಾಯಕ ವಿರಾಟ್ ಕೊಹ್ಲಿಗೆ ಹರ್ಭಜನ್ ಸಿಂಗ್ ಒಂದು ಸಲಹೆ ನೀಡಿದ್ದಾರೆ.

Advertisement

ಮುಂದಿನ ಪಂದ್ಯದಲ್ಲಿ ಟೀಂ ಇಂಡಿಯಾ ಸ್ಪಿನ್ನರ್ ಗಳಾದ ಯುಜುವೇಂದ್ರ ಚಾಹಲ್ ಮತ್ತು ಕುಲದೀಪ್ ಯಾದವ್ ಇಬ್ಬರನ್ನೂ ಆಡಿಸಬೇಕು ಎಂದು ಹರ್ಭಜನ್ ಸಿಂಗ್ ಅಭಿಪ್ರಾಯ ಪಟ್ಟಿದ್ದಾರೆ.

ಸ್ಟಾರ್ ಸ್ಪೋರ್ಟ್ ಗೆ ಮಾತನಾಡಿದ ಟರ್ಬನೇಟರ್, ಕಿವೀಸ್ ಬ್ಯಾಟ್ಸಮನ್ ಗಳು ವೇಗದ ಬೌಲರ್ ಗಳಿಗೆ ಉತ್ತಮವಾಗಿ ಆಡುತ್ತಾರೆ. ಆದರೆ ಸ್ಪಿನ್ನರ್ ಗಳಿಗೆ ಕಷ್ಟ ಪಡುತ್ತಾರೆ. ಭಾರತ ಮುಂದಿನ ಪಂದ್ಯದಲ್ಲಿ ಚಾಹಲ್ ಮತ್ತು ಕುಲದೀಪ್ ಇಬ್ಬರನ್ನೂ ಆಡಿಸಬೇಕು. ಬಹುಶಃ ಕೇದಾರ್ ಜಾದವ್ ರನ್ನು ಹೊರಗಿರಿಸಿ ಬೌಲರ್ ನನ್ನು ಆಡಿಸಬೇಕು ಎಂದಿದ್ದಾರೆ.

ಮೊದಲ ಏಕದಿನ ಪಂದ್ಯದಲ್ಲಿ ಚಾಹಲ್ ಆಡುವ ಅವಕಾಶ ಪಡೆದಿರಲಿಲ್ಲ. ಕುಲದೀಪ್ ಯಾದವ್ ಎರಡು ವಿಕೆಟ್ ಪಡೆದರೂ 84 ರನ್ ನೀಡಿ ದುಬಾರಿಯಾಗಿದ್ದರು.

ದ್ವಿತೀಯ ಪಂದ್ಯ ಶನಿವಾರ ಆಕ್ಲಂಡ್ ನಲ್ಲಿ ನಡೆಯಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next