Advertisement
ಮೂಡಿಗೆರೆ ತಾಲೂಕಿನ ಜಾವಳ್ಳಿಯಲ್ಲಿ ಹುಟ್ಟಿ ಸಕಲೇಶಪುರ ಪಟ್ಟಣದ ಹೃದಯ ಭಾಗದಲ್ಲಿ ಹಾದು ಹೋಗಿರುವ ಹೇಮಾವತಿ ನದಿ, ಲಕ್ಷಾಂತರ ಮಂದಿಯ ದಾಹ ನೀಗಿಸುತ್ತಿದೆ. ಹಾಸನ, ತುಮಕೂರು, ಮಂಡ್ಯ ಸೇರಿ ಮೂರು ಜಿಲ್ಲೆಗಳ ಸಾವಿರಾರು ಹೆಕ್ಟೇರ್ ಕೃಷಿ ಭೂಮಿ, ರೈತರಿಗೆ ಅನ್ನ ನೀಡುತ್ತಿದೆ.
Related Articles
Advertisement
ಮ ರಳು ಗಣಿಗಾರಿಕೆ: ಹೇಮಾವತಿ ನದಿ ತೀರದಲ್ಲಿ ಮಿತಿ ಮೀರಿದ ಮರಳುಗಾರಿಕೆ ಮಾಡಲಾಗುತ್ತಿದೆ. ಈ ಹಿಂದೆ ತಾಲೂಕಿನ ಅಭಿವೃದ್ಧಿ ಕಾಮಗಾರಿಗಳಿಗೆ ಮಾತ್ರ ಮರಳನ್ನು ತೆಗೆಯಲಾಗುತ್ತಿತ್ತು. ಆದರೆ, ಇತ್ತೀಚೆಗೆ ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಗೆ ಸಾಗಿಸುವ ದಂಧೆ ನಡೆಯುತ್ತಿದೆ. ಇದರಿಂದ ಹೇಮಾವತಿ ನದಿ ಪಾತ್ರ ಸಂಪೂರ್ಣ ಬರಿದಾಗುತ್ತಿದೆ. ಒಟ್ಟಾರೆಯಾಗಿ ನದಿ ತೀರದ ಸ್ವಚ್ಛತೆ ಕಾಪಾಡ ಬೇಕಾಗಿರುವ ತಾಲೂಕು ಆಡಳಿತ, ಪುರಸಭೆ, ಜನಪ್ರತಿನಿಧಿಗಳು ಯಾವುದೇ ಕ್ರಮ ಕೈಗೊಳ್ಳದಿರುವುದು ಬೇಸರದ ಸಂಗತಿಯಾಗಿದೆ.
ಹೆಪ್ಪು ಗಟ್ಟುತ್ತಿರುವ ನೀರು : ಸುಮಾರು 10ಕ್ಕೂ ಹೆಚ್ಚು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿದಕೋಳಿ, ಇತರೆ ಮಾಂಸದ ತ್ಯಾಜ್ಯ ನದಿ ತೀರಕ್ಕೆ ತಂದು ಎಸೆಯಲಾಗಿದೆ. ಕೋಳಿಯ ಗರಿಗಳು,ಕೋಳಿ ಕಾಲು, ಮಾಂಸದ ತುಂಡುಗಳು ಮತ್ತಿತರ ತ್ಯಾಜ್ಯದ ಚೀಲಗಳಲ್ಲಿ ತುಂಬಿ ಸೇತುವೆಯ ಮೇಲಿಂದ ನದಿಗೆ ಎಸೆಯಲಾಗಿದೆ. ನದಿಯಲ್ಲಿ ನೀರಿನ ಹರಿವು ತೀರಾಕಡಿಮೆಯಾಗಿದ್ದು,ಕೆಲವು ಹೊಂಡ ಹಾಗೂ ಸಣ್ಣ ಗುಂಡಿಗಳಲ್ಲಿ ನೀರು ಶೇಖರಣೆಯಾಗಿದೆ. ಈ ರೀತಿ ಕೋಳಿ ತ್ಯಾಜ್ಯ ಎಸೆಯುತ್ತಿರುವುದರಿಂದ ನೀರು ಸಂಪೂರ್ಣ ಮಲಿನಗೊಂಡು, ಹೆಪ್ಪು ಕಟ್ಟಿದ ರೀತಿಯಲ್ಲಿದೆ. ಮಾಂಸದ ತ್ಯಾಜ್ಯವನ್ನು ತಿನ್ನಲು ನಾಯಿಗಳ ಹಿಂಡು ಪ್ರತಿ ದಿನ ನದಿಗೆ ಬರುತ್ತಿವೆ. ಮಾಂಸದ ತ್ಯಾಜ್ಯವನ್ನು ಗುಂಡಿಯಲ್ಲಿ ಹಾಕಿ ಸಂಸ್ಕರಿಸಬೇಕೆಂಬ ನಿಯಮವಿದ್ದರೂಯಾವುದನ್ನು ಮಾಡದೆ, ಮಾಂಸದ ಅಂಗಡಿಗಳ ಮಾಲಿಕರು ನೇರವಾಗಿ ತ್ಯಾಜ್ಯವನ್ನು ನದಿಗೆ ತಂದು ಹಾಕುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆಕಾರಣವಾಗಿದೆ.
ಹೇಮಾವತಿ ನದಿಗೆ ಮಾಂಸದ ತ್ಯಾಜ್ಯ ಹಾಕುವ ಅಂಗಡಿಗಳ ಲೈಸೆನ್ಸ್ ರದ್ಧತಿಗೆ ಶಿಫಾರಸು ಮಾಡಲಾಗುವುದು, ಅಕ್ರಮ ಮರಳುಗಾರಿಕೆ ಮಾಡುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುತ್ತದೆ. –ಮಂಜುನಾಥ್, ತಹಶೀಲ್ದಾರ್
ನದಿಯಲ್ಲಿಕೋಳಿ ಮಾಂಸದ ತ್ಯಾಜ್ಯ ತಂದು ಹಾಕುತ್ತಿರುವುದು ಸರಿಯಲ್ಲ. ಇದರಿಂದ ಮಲೀನ ನೀರನ್ನುಕುಡಿಯುವ ಪರಿಸ್ಥಿತಿ ಪಟ್ಟಣದಲ್ಲಿ ನಿರ್ಮಾಣವಾಗಿದೆ. ನದಿಗೆ ತ್ಯಾಜ್ಯ ಹಾಕುವವರ ವಿರುದ್ಧಕಠಿಣ ಕ್ರಮಕೈಗೊಳ್ಳಬೇಕು. –ರಕ್ಷಿತ್, ಸಕಲೇಶಪುರ ಪಟ್ಟಣ ನಿವಾಸಿ
-ಸುಧೀರ್ ಎಸ್.ಎಲ್