Advertisement

ಪಡಿತರದಲ್ಲಿ ಪ್ಲಾಸ್ಟಿಕ್‌ ಅಕ್ಕಿ: ದೂರು

07:07 PM Feb 02, 2021 | Team Udayavani |

ಶ್ರೀರಂಗಪಟ್ಟಣ: ತಾಲೂಕಿನ ಕಿರಂಗೂರು ಗ್ರಾಮದ ಪಡಿತರ ಅಂಗಡಿಯಲ್ಲಿ ಪ್ಲಾಸ್ಟಿಕ್‌ ಅಕ್ಕಿ ವಿತರಣೆ ಮಾಡಲಾಗಿದೆ ಎಂದು ಗ್ರಾಮಸ್ಥರು ತಹಶೀಲ್ದಾರ್‌ ಅವರಲ್ಲಿ ದೂರಿದ್ದಾರೆ. ಪ್ರತಿ ತಿಂಗಳು ಪಡಿತರದಾರರಿಗೆ ನೀಡುವ ಅಕ್ಕಿಯಲ್ಲಿ ಪ್ಲಾಸ್ಟಿಕ್‌ ಅಂಶ ಕಂಡು ಬಂದಿದೆ.

Advertisement

ಈ ಬಗ್ಗೆ ಮೌಖೀಕವಾಗಿ ತಿಳಿಸಲಾಗಿತ್ತು. ಆದರೆ, ಈ ಬಾರಿ ಅಕ್ಕಿಯನ್ನು ಮಿಲ್ಲಿನಲ್ಲಿ ಹಿಟ್ಟು ಮಾಡಿಸಿ ನಂತರ ಅದನ್ನು ಪರಿಶೀಲಿಸಿದ ವೇಳೆ ಪ್ಲಾಸ್ಟಿಕ್‌ ಅಂಶ ಕಂಡು ಬಂದಿದೆ. ಈ ಬಗ್ಗೆ ಆಹಾರ ಇಲಾಖೆ ಅಧಿಕಾರಿಗಳು ಪರಿಶೀಲಿಸಬೇಕು. ಈ ಅಕ್ಕಿ ಬಳಕೆಯಿಂದ ಸಾರ್ವಜನಿಕರಿಗೆ ರೋಗಗಳು ಬರಬಹುದಾಗಿದೆ.

ಇದನ್ನೂ ಓದಿ:ಕಸದ ರಾಶಿಗಳಿಂದ ಕೊನೆಗೂ ಮುಕ್ತಿಗೊಂಡ ವೇಮಗಲ್‌

ಮುನ್ನೆಚ್ಚರಿಕೆ ವಹಿಸಿ ತಹಶೀಲ್ದಾರ್‌ ಹಾಗೂ ಆಹಾರ ಇಲಾಖೆ ಅಧಿಕಾರಿಗಳು ಪರಿಶೀಲಿಸಬೇಕು ಎಂದು ಒತ್ತಾಯಿಸಿ, ಗ್ರಾಮದ ಹರೀಶ್‌ ಕುಮಾರ್‌, ವಕೀಲ ಬಾಲು, ಹರೀಶ್‌ ಮತ್ತಿತರರು ತಹಶೀಲ್ದಾರ್‌ ಪುಟ್ಟಸ್ವಾಮಿಗೌಡ ಅವರಿಗೆ ಮನವಿ ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next