Advertisement
ಹೇಮಗಿರಿಯಲ್ಲಿ ಜ.26ರಿಂದ ಫೆ. 8ರವರೆಗೆ ನಡೆಯ ಲಿರುವ ದನಗಳ ಜಾತ್ರೆ ಪ್ರಯುಕ್ತ ಪಟ್ಟಣದ ಮಿನಿವಿಧಾನ ಸೌಧದ ತಾಲೂಕು ಕಚೇರಿ ಆವರಣದಲ್ಲಿ ಆಯೋಜಿಸಿದ್ದ ಜಾತ್ರಾ ಕಾಲದ ಸುಂಕ ಹರಾಜು ಪ್ರಕ್ರಿಯೆ ಸಭೆಯಲ್ಲಿ ಅವರು ಮಾತನಾಡಿದರು.
Related Articles
Advertisement
ಯಾವುದಕ್ಕೆ ಎಷ್ಟು ಸುಂಕ: ಹರಾಜು ಪ್ರಕ್ರಿಯೆಯಲ್ಲಿ ಅಂಗಡಿ ಮೇಲಿನ ಸುಂಕವು 1.79 ಲಕ್ಷ ರೂ.ಗೆ ಹರಾಜಾಯಿತು. ದನಗಳ ಸುಂಕವು 75 ಸಾವಿರ ರೂ., ಗೊಬ್ಬರ ಸುಂಕವು 13 ಸಾವಿರ ರೂ., ವಾಹನಗಳ ಸುಂಕ 40 ಸಾವಿರ ರೂ., ಹಣ್ಣು-ಕಾಯಿ ಸುಂಕವು 5 ಸಾವಿರ ರೂ., ಗೋಲಕ 4 ಸಾವಿರ ರೂ., ಹುಣಸೇಮರದ ಸುಂಕ 9 ಸಾವಿರ ರೂ., ಹುಲ್ಲುಗಾವಲು ಸುಂಕವು 2 ಸಾವಿರ ರೂ.ಗಳಿಗೆ ಹರಾಜು ಕೂಗಲಾಯಿತು. ಬರಗಾಲದ ಹಿನ್ನೆಲೆಯಲ್ಲಿ ನಿರೀಕ್ಷಿತ ಹರಾಜು ನಡೆಯದೇ ಇದ್ದರೂ ಸ್ಥಳೀಯರು ಹರಾಜು ಪ್ರಕ್ರಿಯೆಗೆ ಶಕ್ತಿ ಮೀರಿ ಸಹಕರಿಸುವ ಮೂಲಕ ಜಾತ್ರೆಯ ಅಭಿವೃದ್ಧಿಗೆ ಸಹಕರಿಸಿದರು.
ಮುಜರಾಯಿ ಶಿರಸ್ತೇದಾರ್ ಮಹದೇವೇಗೌಡ, ಮರಿಸಿದ್ದೇಗೌಡ, ಚಂದ್ರಿಕಾ, ಗ್ರಾಮ ಲೆಕ್ಕಾಧಿಕಾರಿ ಹರೀಶ್, ಬಂಡಿಹೊಳೆ ಕಾವೇರಿ ಗ್ರಾಮೀಣ ಬ್ಯಾಂಕ್ ವ್ಯವಸ್ಥಾಪಕ ಜಗದೀಶ್, ಟಿಎಪಿಸಿಎಂಎಸ್ ನಿರ್ದೇಶಕ ಅಶೋಕ್, ಯಜಮಾನ್ ರಾಜಶೇಖರ್, ಗ್ರಾಪಂ ಮಾಜಿ ಅಧ್ಯಕ್ಷ ಬಿ.ಮಂಜುನಾಥ್, ಪುರಸಭೆ ಮಾಜಿ ಅಧ್ಯಕ್ಷ ಚಂದ್ರೇಗೌಡ, ದೇವರಸೇಗೌಡ, ವಿಶ್ವನಾಥ್, ಬಂಡಿಹೊಳೆ ಜಯರಾಂ, ರಾಜಶೇಖರ್, ಸುರೇಶ್, ದೇವಾಲಯ ಪ್ರಧಾನ ಅರ್ಚಕ ರಾಮಭಟ್, ಪಾರುಪತ್ತೇಗಾರ್ ರಂಗರಾಜ್ ಮತ್ತಿತರರು ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು. ಪಟ್ಟಣ ಠಾಣೆ ಸಹಾಯಕ ಸಬ್ಇನ್ಸ್ಪೆಕ್ಟರ್ ಶಿವಣ್ಣ ನೇತೃತ್ವದಲ್ಲಿ ಭದ್ರತೆ ಒದಗಿಸಲಾಗಿತ್ತು.